• Home  
  • ಕಡಬ ಪತ್ರಕರ್ತರ ಸಮಾಜ ಸೇವೆ ಮಾದರಿ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಶ್ಲಾಘನೆ
- LATEST NEWS

ಕಡಬ ಪತ್ರಕರ್ತರ ಸಮಾಜ ಸೇವೆ ಮಾದರಿ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಶ್ಲಾಘನೆ

ಕಡಬ: ಜೂನ್,08 : ಪತ್ರಕರ್ತರು ತಮ್ಮ ದಿನನಿತ್ಯದ ಕರ್ತವ್ಯದ ಜೊತೆಗೆ ಸಮಾಜದ ಜನರ ಅನುಕೂಲಕ್ಕಾಗಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಕ್ಕೆ ಸಹಾಯಧನ ನೀಡುವ ಮೂಲಕ ಕಡಬದ ಪತ್ರಕರ್ತರ ಸಂಘ ಮಾದರಿ ಕೆಲಸ ಮಾಡುತ್ತಿದೆ ಎಂದು ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಹೇಳಿದರು. ಅವರು ಸೋಮವಾರ ಕಡಬ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ […]

Share News

ಕಡಬ: ಜೂನ್,08 : ಪತ್ರಕರ್ತರು ತಮ್ಮ ದಿನನಿತ್ಯದ ಕರ್ತವ್ಯದ ಜೊತೆಗೆ ಸಮಾಜದ ಜನರ ಅನುಕೂಲಕ್ಕಾಗಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಕ್ಕೆ ಸಹಾಯಧನ ನೀಡುವ ಮೂಲಕ ಕಡಬದ ಪತ್ರಕರ್ತರ ಸಂಘ ಮಾದರಿ ಕೆಲಸ ಮಾಡುತ್ತಿದೆ ಎಂದು ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಹೇಳಿದರು.

ಅವರು ಸೋಮವಾರ ಕಡಬ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ನಡೆದ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬೇರೆ ಎಲ್ಲಾ ರೀತಿಯ ಶಿಬಿರಗಳು ನಮ್ಮಲ್ಲಿ ನಡೆಯುತ್ತವೆ, ಆದರೆ ಕಿವಿಯ ಶ್ರವಣ ತಪಾಸಣೆಯಂತ ಶಿಬಿರಗಳು ಬಹಳ ಅಪರೂಪವಾಗಿದೆ, ಇಂತಹ ಶಿಬಿರಗಳಿಂದ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಅನುಕೂಲವಾಗುತ್ತದೆ, ಕಡಬದಲ್ಲಿ ಈ ಶಿಬಿರ ಪ್ರತೀ ತಿಂಗಳ ನಡೆಸುವಂತಾಗಬೇಉ, ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ತವiನ್ನಾ ಜಬಿನ್ ಹೇಳಿದರು.
ಟೀಮ್ ಈಶ್ವರ ಮಲ್ಪೆ ಟ್ರಸ್ಟ್ ಸಂಯೋಜಕ ಲವ ಬಂಗೇರ ಮಾತನಾಡಿ ಈಶ್ವರ್ ಮಲ್ಪೆಯವರ ನೇತೃತ್ವದಲ್ಲಿ ಹಲವು ಸಮಾಜ ಸೇವಾ ಕಾರ್ಯಗಳನ್ನು ರಾಜ್ಯಾದ್ಯಂತ ಮಾಡುತ್ತಾ ಬರಲಾಗುತ್ತಿದೆ, ಉಚಿತ ಕಿವಿಯ ಶ್ರವಣ ತಪಾಸನೆ ಹಾಗೂ ಯಂತ್ರಗಳ ವಿತರಣಾ ಕಾರ್ಯದ ಶಿಬಿರವನ್ನು ವಿವಿಧ ಸಂಘಟನೆಗಳ ಜೊತೆಗೂಡಿ ನಡೆಸುತ್ತಾ ಬಂದಿದ್ದೇವೆ. ಇದು ೧೨೧ ನೇ ಶಿಬಿರವಾಗಿದ್ದು ಸಾವಿರಾರು ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು. ಟೀಮ್ ಈಶ್ವರ ಮಲ್ಪೆಯ ತಜ್ಞ ವೈದ್ಯ ಡಾ. ಪವನ್ ಮಾತನಾಡಿ ಸಾಮಾನ್ಯವಾಗಿ ನಾವು ಕಿವಿಯ ಸಮಸ್ಯೆಯ ಬಗ್ಗೆ ಅಷ್ಟೊಂದು ಕಾಳಜಿವಹಿಸುತ್ತಿಲ್ಲ. ಸಾಮಾನ್ಯವಾಗಿ ನರಗಳ ದೋಷದಿಂದ ಕಿವಿಯ ಸಮಸ್ಯೆ ಉಂಟಾಗುತ್ತದೆ. ಕಿವಿಯ ಸಮಸ್ಯೆ ಉಲ್ಭಣವಾಗುವ ಮುಂಚೆ ತಪಾಸನೆ ನಡೆಸಿ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿದರೆ ಒಳಿತು, ಯಾಕೆಂದರೆ ಕಿವಿ ಕೂಡಾ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ ಕಿವಿಯ ಬಗ್ಗೆ ನಿಗಾವಹಿಸಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊÊಲ ಮಾತನಾಡಿ ಪತ್ರಕರ್ತರು ಸಮಾಜದ ಅಂಕುಡೊAಕುಗಳನ್ನು ತಿದ್ದುವುದರೊಂದಿಗೆ ಜನರ ಬದುಕಿಗೆ ಪೂರಕವಾದ ಸೇವಾ ಕಾರ್ಯ ಮಾಡಿದರೆ ತಮ್ಮ ವೃತ್ತಿಗೆ ಮತ್ತಷ್ಟು ಘನತೆ ಗೌರವ ಬರುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಆಲೋಚನೆ ಮಾಡಬೇಕು, ಕೇವಲ ನಕಾರಾತ್ಮ ವಿಚಾರಗಳಿಗೆ ಮಾತ್ರ ಸೀಮಿತವಾಗದೆ ಸಕಾರಾತ್ಮ ವಿಚಾರಗಳಿಗೂ ಆದ್ಯತೆ ನೀಡಿ ಸಮಾಜ ಸೇವ ಕಾರ್ಯಗಳನ್ನು ಮಾಡಬೇಕು, ಕಡಬ ತಾಲೂಕು ಪತ್ರಕರ್ತರ ಸಂಘ ಕೇವಲ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಸೀಮಿತವಾಗದೆ, ಹಲವು ಸಮಾಜಮುಖಿ ಕಾರ್ಯಗಳನ್ನು ಮಡುತ್ತಾ ವೈಶಿಷ್ಟö್ಯಪೂರ್ಣ ಸಂಘವಾಗಿ ಬೆಳೆದು ಬಂದಿದೆ ಎಂದರು.
ಸಂಘದ ಉಪಾಧ್ಯಕ್ಷ ಲೋಕೇಶ್ ಬಿ. ಎನ್. ಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿ ಸುಧಾಕರ ಆಚಾರ್ಯ ಕಾಣಿಯೂರು , ಕೋಶಾಧಿಕಾರಿ ಪ್ರವೀಣ್‌ರಾಜ್ ಕೆ.ಎಸ್., ಸದಸ್ಯರಾದ ದಿವಾಕರ ಎಂ., ಪ್ರಶಾಂತ್ ಸಿ.ಎಚ್., ತಸ್ಲಿಮ್ ಮರ್ಧಾಳ, ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿಕಟಪೂರ್ವಾಧ್ಯಕ್ಷ ನಾಗರಾಜ್ ಎನ್.ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share News