*ದಲಿತ್ ಸೇವಾ ಸಮಿತಿಯ ಹೋರಾಟದ ಫಲ: ಕಳಂಜದ ಬಡ ಕುಟುಂಬಕ್ಕೆ ಸೂರು – ಬಿ.ಕೆ. ಸೇಸಪ್ಪ ಬೆದ್ರಕಾಡು ಅವರಿಗೆ ಗೌರವಾರ್ಪಣೆ*
ಸುಳ್ಯ:ಏಪ್ರಿಲ್.6: ಅರಣ್ಯ ಇಲಾಖೆಯ ಜಾಗದಲ್ಲಿದ್ದು ಕೊಂಡು ಮೂಲಭೂತ ಸೌಕರ್ಯಗಳಿಂದ ವಂಚಿತ ರಾಗಿದ್ದ ಬಡ ಕುಟುಂಬವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ಹೋರಾಟದ ಫಲವಾಗಿ ಇಂದು ಸುಸಜ್ಜಿತ ಮನೆಯ ಕನಸು ನನಸಾಗಿದೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ಕೋಟೆ ಮುಂಡುಗಾರ್ ನಿವಾಸಿಗಳಾದ ಕೃಷ್ಣ ನಾಯ್ಕ್ ಮತ್ತು ಅನುರಾಧ ದಂಪತಿಗಳು ಕಳೆದ ಹಲವಾರು ವರ್ಷಗಳಿಂದ ಅರಣ್ಯ ಇಲಾಖೆಯ ವ್ಯಾಪ್ತಿಯ ಜಾಗದಲ್ಲಿ ವಾಸವಿದ್ದರು. ಇವರಿಗೆ ಯಾವುದೇ ಮೂಲಭೂತ ಸೌಕರ್ಯಗಳಿರಲಿಲ್ಲ ಹಾಗೂ ಮನೆ ನಿರ್ಮಿಸಲು ಅಡೆತಡೆಗಳಿದ್ದವು. ಈ ಬಗ್ಗೆ ಕುಟುಂಬವು […]











