*ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಮಕ್ಕಳ ಆಶೀರ್ವಾದದೊಂದಿಗೆ ‘ಹೋಲಿ ಇನ್ನೋಸೆಂಟ್ಸ್’ ಹಬ್ಬದ ಆಚರಣೆ*
ಮಂಗಳೂರಿನ ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್ನಲ್ಲಿರುವ ಬಾಲ ಯೇಸುವಿನ ಪುಣ್ಯಕ್ಷೇತ್ರವು, ಕ್ರಿಸ್ಮಸ್ ಹಬ್ಬದ ಮೂರನೇ ದಿನದಂದು ಆಚರಿಸಲಾಗುವ ‘ಹೋಲಿ ಇನ್ನೋಸೆಂಟ್ಸ್’ (ಪವಿತ್ರ ಮುಗ್ಧರ ಹಬ್ಬ) ದಿನದಂದು ಮಕ್ಕಳ ಮೇಲೆ, ವಿಶೇಷವಾಗಿ ಶಿಶುಗಳ ಮೇಲೆ ದೇವರ ಆಶೀರ್ವಾದವನ್ನು ಕೋರುವ ತನ್ನ ಸುದೀರ್ಘ ಸಂಪ್ರದಾಯವನ್ನು ಆಚರಿಸಿತು. ಯಹೂದಿಗಳ ರಾಜನಾಗಿ ಜನಿಸಿದ ಯೇಸುವಿನ ಬಗ್ಗೆ ಭಯಗೊಂಡ ರಾಜ ಹೆರೋದನಿಂದ ಹತ್ಯೆಗೀಡಾದ ಮುಗ್ಧ ಶಿಶು ಹುತಾತ್ಮರ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಕ್ಕಳಂಬ ಉಡುಗೊರೆಗಾಗಿ ಸಲ್ಲಿಸಲಾದ ವಿಶೇಷ ಪ್ರಾರ್ಥನೆಗಳಲ್ಲಿ ಪಾಲ್ಗೊಳ್ಳಲು ಪೋಷಕರು ತಮ್ಮ ಪುಟ್ಟ […]











