*ಹೊಸ ವರುಷ ಕ್ರೈಸ್ತರು ಚರ್ಚ್ ಗಳಲ್ಲಿ ವಿಶೇಷ ಪರಮಪ್ರಸಾದದ ಆರಾಧನೆ, ಬಲಿಪೂಜೆ ಶಾಂತಿ,ನೆಮ್ಮದಿಗಾಗಿ ಪ್ರಾರ್ಥನೆ*
ಮಂಗಳೂರು, ಡಿ.31: ಹೊಸ ವರುಷ ಹಾಗೂ ದೇವಮಾತೆಯ ಹಬ್ಬವನ್ನು ಮಂಗಳೂರಿನ ಕ್ರೈಸ್ತರು ಇಂದು ಆಚರಿಸುತ್ತಿದ್ದು, ಈ ಹಿನ್ನೆಲೆ ಬುಧವಾರ ರಾತ್ರಿ ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆಗಳು ನಡೆದವು. ಹಳೆಯ ವರ್ಷದಲ್ಲಿ ದೇವರು ಕರುಣಿಸಿದ ವರಗಳಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ಹೊಸ ವರುಷ ಜಗತ್ತಿಗೆ ಹರುಷ ತರಲಿ ಎಂದು ಪ್ರಾರ್ಥಿಸಲಾಯಿತು. ಮಂಗಳೂರಿನ ರೊಸಾರಿಯೋ ಕ್ಯಾಥೆಡ್ರಲ್, ಮಿಲಾಗ್ರಿಸ್, ಕೊರ್ಡೆಲ್, ಬೆಂದೂರು, ಕೂಳೂರು, ಬಿಜೈ, ಅಶೋಕ ನಗರ, ಆಂಜೇಲೋರ್, ಬೊಂದೇಲ್, ವಾಮಂಜೂರು, ಫಳ್ನೀರ್, ಕಾಸಿಯಾ, ಬಜಾಲ್, ಪಾಲ್ದನೆ, ದೇರೆಬೈಲ್, ಶಕ್ತಿನಗರ, ಕೆಲರೈ […]











