ಪಟಾಕಿ ಸಿಡಿದು ಗಾಯಗೊಂಡ ಬಾಲಕನ ಚಿಕಿತ್ಸೆಗೆ ಹರಿದು ಬಂತು ನೆರವು; ಪುಟ್ಟ ಬಾಲಕನತ್ತ ಮಿಡಿದ ಹೃದಯಗಳು; ಬಾಲಕ ಗೌತಮ್ ಚಿಕಿತ್ಸೆಗೆ 15.5 ಲಕ್ಷ ರೂ. ಸಂಗ್ರಹ
ವಿಟ್ಲ: ಮಾಣಿಲ ಗ್ರಾಮದ ಬಿರ್ಕಪು ನಿವಾಸಿ ಜಯರಾಮ ಪೂಜಾರಿ ಹಾಗೂ ಯಶೋಧಾ ದಂಪತಿಯ ಪುತ್ರ ಗೌತಮ್ ಚಿಕಿತ್ಸೆಗೆ ಸಹೃದಯಿಗಳು ಮಿಡಿದಿದ್ದು, 15.5 ಲಕ್ಷ ರೂ. ಸಂಗ್ರಹವಾಗಿದೆ. ನೆರವಾದ ಎಲ್ಲರಿಗೂ ಕುಟುಂಬ ಕೃತಜ್ಞತೆ ಸಲ್ಲಿಸಿದೆ. ದೀಪಾವಳಿಯ ಪೂರ್ವ ತಯಾರಿಯ ಸಮಯದಲ್ಲಿ ಹಳೆ ಪಟಾಕಿ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಪಟಾಕಿ ಸಿಡಿದು ಗೌತಮ್ ನ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿತ್ತು. ಆತನ ಚಿಕಿತ್ಸೆಗೆ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ 12 ಲಕ್ಷ ರೂ. ಅಗತ್ಯವಿದೆ ಎಂದಿದ್ದರು. ಬಡಕುಟುಂಬಕ್ಕೆ ಆ ಮೊತ್ತ […]











