Month: February 2026

DAKSHINA KANNADA HOME LATEST NEWS

ಕಡಬ: ಪೋಲ್ಯಾಂಡ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು ದಂಪತಿಯಿಂದ ₹ 5 ಲಕ್ಷ ದೋಖಾ

ಕಡಬ: ಪೋಲೆಂಡ್ ದೇಶದಲ್ಲಿ ಉದ್ಯೋಗ ವೀಸಾ ಕಲ್ಪಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 4.50 ಲಕ್ಷ ರೂ. ಹಣ ಪಡೆದು ವಂಚನೆ ನಡೆಸಿದ ಆರೋಪದಡಿ ಬೆಳ್ತಂಗಡಿ ತಾಲೂಕಿನ ದಂಪತಿ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ  ಮನೋಜ್ ಎಂಬುವವರು ವಿದೇಶದಲ್ಲಿ ಉದ್ಯೋಗ ಹುಡುಕುತ್ತಿದ್ದರು. ಈ ವೇಳೆ ಬೆಳ್ತಂಗಡಿ ತಾಲೂಕು ರೇಖ್ಯಾ ಗ್ರಾಮದ ಇಂಜಿರ ನಿವಾಸಿಗಳಾದ ಪರಂಬಿಲ್ ಜೋಸೆಫ್ ಮನೋಜ್ ಹಾಗೂ ಅವರ ಪತ್ನಿ ಸ್ಮಿತಾ ಮನೋಜ್ ಎಂಬವರ ಪರಿಚಯವಾಗಿದೆ. ಈ ವೇಳೆ “ಪೋಲೆಂಡ್ […]

DAKSHINA KANNADA HOME

*ಅಧಿಕಾರ ಹಸ್ತಾಂತರದ ಗೊಂದಲದಿಂದ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ವಿಳಂಬ; ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪ*

ಮಂಗಳೂರು: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವಿಳಂಬ ಆಗುತ್ತಿರುವುದಕ್ಕೆ ರಾಜಕೀಯ ಲೆಕ್ಕಾಚಾರ ಕಾರಣ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.ಮಂಗಳೂರಿನಲ್ಲಿ ಇಂದು ಹೇಳಿಕೆ ನೀಡಿದ ನಳೀನ್ ಕುಮಾರ್ ಕಟೀಲ್, ಆಡಳಿತ ಪಕ್ಷ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾ‌ರ್ ನಡುವೆ ಅಧಿಕಾರದ ಹಸ್ತಾಂತರದ ಗೊಂದಲಗಳಿರುವ ಕಾರಣದಿಂದ ವಿಳಂಬವಾಗಿದೆ ಎಂದು ಹೇಳಿದ್ದಾರೆ.ಅಲ್ಲದೇ, ಮುಂದಿನ ಮುಖ್ಯಮಂತ್ರಿ ಯಾರು ಎಂದ ಚರ್ಚೆ ಕಾಂಗ್ರೆಸ್‌ ಹಾಗೂ ರಾಜ್ಯ ಸರ್ಕಾರದ ಒಳಗೆ ಇರುವುದರಿಂದ, ಆಯ್ಕೆ ಪ್ರಕ್ರಿಯೆ ನಿಧಾನ ಆಗಿರುವುದರಿಂದ, […]

DAKSHINA KANNADA HOME LATEST NEWS

ಮಂಜೇಶ್ವರ: 18ರ ಹರೆಯದ ಮಗಳನ್ನೇ ಬರ್ಬರ ಹತ್ಯೆಗೈದ ಪಾಪಿ ತಂದೆ

ಮಂಜೇಶ್ವರ: ತಂದೆಯೋರ್ವ ತನ್ನ ಮಗಳನ್ನೇ ಕೊಚ್ಚಿ ಕೊಲೆ ಗೈದ ದಾರುಣ ಘಟನೆಯೊಂದು ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ಇಂದು ಸಂಜೆ ನಡೆದಿದೆ. ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ತೂಮಿನಾಡಿನ ಜುಮೈಲಾ(18) ಕೊಲೆಗೀಡಾದ ಯುವತಿ. ಕೃತ್ಯ ನಡೆಸಿದ ಆರೋಪದಲ್ಲಿ ತಂದೆ ಉಮ್ಮರ್ ಫಾರೂಕ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿರುಚಾಟದ ಶಬ್ದ ಕೇಳಿ ಪರಿಸರ ವಾಸಿಗಳು ಸ್ಥಳಕ್ಕೆ ಬಂದಾಗ ಜುಮೈಲಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ […]

DAKSHINA KANNADA HOME LATEST NEWS

ಮಂಗಳೂರು ಜೈಲಿನಲ್ಲಿ ಆರೋಪಿ ಚಡ್ಡಿಯೊಳಗೆ ಮೊಬೈಲ್‌ – ಸಿಬ್ಬಂದಿ ದಾಳಿ ವೇಳೆ ಪತ್ತೆ

ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಪೊಲೀಸ್‌ ದಾಳಿ ವೇಳೆ ಬಂಧಿತ ಆರೋಪಿಯೊಬ್ಬನ ಒಳುಡುಪಿನಲ್ಲಿ ಮೊಬೈಲ್‌ ಪೋನ್‌ ಹಾಗೂ ಚಾರ್ಜರ್‌ ದೊರೆತ ಬಗ್ಗೆ ನಗರದ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ ಜ.30ರಂದು ಮಧ್ಯಾಹ್ನದ ವೇಳೆ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಜೈಲು ಅಧೀಕ್ಷಕರು ಕಾರಾಗೃಹದ ಒಳಗಡೆಯ “ಎ” ವಿಭಾಗದ ಕೊಠಡಿ ಸಂಖ್ಯೆ 3 ರಲ್ಲಿ ಅನಿರೀಕ್ಷಿತ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಆರೋಪಿ ಮೊಹ್ಮದ್ ಎಂಬ ಬಂಧಿತನ ದೇಹ ಶೋಧನೆ ಮಾಡಿದ್ದಾರೆ. ಈ ವೇಳೆ  ಆತನ […]

DAKSHINA KANNADA HOME LATEST NEWS

ವಿಟ್ಲ: ದ್ವಿಚಕ್ರ ವಾಹನಕ್ಕೆ ಗುದ್ದಿ ಓಮ್ನಿ ಪರಾರಿ- ಮಹಿಳೆಯರಿಬ್ಬರು ಗಂಭೀರ

ವಿಟ್ಲ: ದ್ವಿಚಕ್ರ ವಾಹನಕ್ಕೆ ಅತೀ ವೇಗದಿಂದ ಓಮ್ನಿಯೊಂದು ಹಿಂದಿನಿಂದ ಗುದ್ದಿದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಅಳಿಕೆ ಗ್ರಾಮದ ನಿವಾಸಿ ಜೆಸಿಂತಾ (31) ಹಾಗೂ ಪೆರುವಾಯಿ ಗ್ರಾಮದ ನಿವಾಸಿ ರೇಷ್ಮಾ ಎಂದು ಗುರುತಿಸಲಾಗಿದೆ. ಘಟನೆ ವಿವರ ಫೆ.1 ರಂದು ಕಾರ್ಯನಿಮಿತ್ತ ಇವರಿಬ್ಬರೂ ಹೋಂಡಾ ಡೀಯೋ ದ್ವಿಚಕ್ರ ವಾಹನದಲ್ಲಿ ಮುಡಿಪು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದರು. ಕಡಂಬು ಎಂಬಲ್ಲಿ ತಲುಪುತ್ತಿದ್ದ ವೇಳೆ ಹಿಂದಿನಿಂದ ಅತೀ ವೇಗದಿಂದ ಬಂದ ಓಮ್ನಿಯೊಂದು […]

DAKSHINA KANNADA

*ಫೆ 6ಕ್ಕೆ ರಾಜ್ಯಾದ್ಯಂತ “ಕರಿಕಾಡ”‘ಸಿನಿಮಾ ಬಿಡುಗಡೆ*

ಮಂಗಳೂರು: “ಕರಿಕಾಡ ಸಿನಿಮಾವನ್ನು ಫೆ.6ರಂದು ಕರ್ನಾಟಕ ರಾಜ್ಯದಾದ್ಯಂತ ನೂರು ಥಿಯೇಟರ್ ಗಳಲ್ಲಿ ರಿಲೀಸ್ ಮಾಡ್ತಾ ಇದ್ದೇವೆ. ನಾಯಕನಟನಾಗಿ ನಾನೇ ಅಭಿನಯಿಸಿದ್ದು ನಾಯಕಿಯಾಗಿ ತುಳು ಸಿನಿಮಾಗಳಲ್ಲಿ ನಟಿಸಿರುವ ನಿರೀಕ್ಷಾ ಶೆಟ್ಟಿ ನಟಿಸಿದ್ದಾರೆ. ಯಶ್ ಶೆಟ್ಟಿ, ರಾಜು ಬೆಳವಾಡಿ, ದಿ.ರಾಕೇಶ್ ಪೂಜಾರಿ, ಚಂದ್ರಪ್ರಭಾ ಮತ್ತಿತರರು ನಟಿಸಿದ್ದಾರೆ“ ಎಂದು ಚಿತ್ರದ ನಟ ಕಾಡ ನಟರಾಜ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ”ಕಳಸ, ಕುದ್ರೆಮುಖ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚನ್ನಪಟ್ಟಣದಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಕರಿ ಅಂದ್ರೆ ಆನೆ, ಕಾಡ ಅಂದ್ರೆ ನಾಯಕನ ಹೆಸರು“ […]

HOME LATEST NEWS

ವಿಟ್ಲ: ಕ್ರೈಸ್ತ ಶಿಕ್ಷಣ & ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಸಂತ ರೀಟಾ ಶಾಲೆಯ ರೆನಿಶಾ ಡಿಸೋಜ ಸಾಧನೆ

ವಿಟ್ಲ: ಮಂಗಳೂರು ಧರ್ಮಪ್ರಾಂತ್ಯದ ಮಂಗಳಜ್ಯೋತಿ ಇದರ ವತಿಯಿಂದ ನಡೆದ ಕ್ರೈಸ್ತ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ವಿಟ್ಲದ ಸಂತ ರೀಟಾ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. 10ನೇ ತರಗತಿಯವರಿಗೆ ನಡೆದ ಕ್ರೈಸ್ತ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಪೆರುವಾಯಿಯ ರಾಜೇಶ್‌ ಡಿಸೋಜ ಹಾಗೂ ರೆನಿಟಾ ರೊಡ್ರಿಗಸ್‌ ಇವರ ಮಗಳಾದ ರೆನಿಶಾ ಡಿಸೋಜ ಅವರು ಶೇ 100% ಫಲಿತಾಂಶವನ್ನು ಗಳಿಸಿ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೆಯೇ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಹಸೀಫಾ ಝಹೀಮ. ಬಿ […]

DAKSHINA KANNADA HOME LATEST NEWS UDUPI

ಉಡುಪಿಯಲ್ಲಿ ಝಳಪಿಸಿದ ತಲವಾರು: NSUIನ ಉಪಾಧ್ಯಕ್ಷ ಗಂಭೀರ

ಉಡುಪಿ:  ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ, ಬೈಲೂರು ಚಿಟ್ಪಾಡಿ ನಿವಾಸಿ ಶರತ್ ಕುಂದರ್(25) ಎಂಬವರ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಜ.30ರಂದು ರಾತ್ರಿ ನಗರದ ಪಿಪಿಸಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್‌ ಗಂಭೀರ ಗಾಯಗೊಂಡಿದ್ದು, 6-7 ದುಷ್ಕರ್ಮಿಗಳ ತಂಡದಿಂದ ದಾಳಿ ನಡೆದಿದೆ. ಟಾಟಾ ಸಫಾರಿ, ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಆರೋಪಿಗಳು, ತಲ್ವಾರಿವಾರಿನಿಂದ ದಾಳಿ ನಡೆಸಿ ಕೊಲೆ ಯತ್ನ ನಡೆಸಿದ್ದಾರೆ. ಜೊತೆಗೆ ಜೀವ ಸಹಿತ ಬಿಡುವುದಿಲ್ಲ […]

DAKSHINA KANNADA

*ಮ.ನ.ಪಾ ವ್ಯಾಪ್ತಿಯ ನಾಗುರಿ-ಮಜಾಲು 40 ಲಕ್ಷ ರಸ್ತೆಯ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ಶಾಸಕ ವೇದವ್ಯಾಸ ಕಾಮತ್*

ಮ.ನ.ಪಾ ವ್ಯಾಪ್ತಿಯ 48ನೇ ಕಂಕನಾಡಿ ವೆಲೆನ್ಸಿಯಾ ವಾರ್ಡಿನಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದ ನಾಗುರಿ-ಮಜಾಲು ರಸ್ತೆಯ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಈ ಹಿಂದೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-1ರಲ್ಲಿ ಈ ಕಾಮಗಾರಿಗೆ ಶಿಲನ್ಯಾಸವನ್ನು ನೆರವೇರಿಸಲಾಗಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾದ ಕೂಡಲೇ ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರಕ್ಕೆ ನೀಡಲಾಗಿದ್ದ ಸುಮಾರು 65 ಕೋಟಿ ರೂ. ಅನುದಾನವನ್ನು ತಡೆಹಿಡಿಯಲಾಗಿತ್ತು. ಅದರಿಂದಾಗಿ ಈ […]

DAKSHINA KANNADA HOME

ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್‌ನಿಂದ 77ನೇ ಗಣರಾಜ್ಯೋತ್ಸವ: ಸಾಧಕರಿಗೆ ಸನ್ಮಾನ

ಮಂಗಳೂರು: ನಗರದ ಜೆಪ್ಪುವಿನಲ್ಲಿರುವ ಸೇಂಟ್ ಆಂಟನಿ ಆಶ್ರಮದ ಮ್ಯೂಸಿಯಂ ಹಾಲ್‌ನಲ್ಲಿ ಭಾನುವಾರ ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ದೇಶಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಿಲ್ಡ್‌ನ ಅಧ್ಯಕ್ಷರಾದ ಸುಶಾಂತ್ ಸಿ. ಎ. ಸಲ್ದಾನ್ಹಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ ಮಾತನಾಡಿ, “ಸರ್ಕಾರಿ ವಲಯದಲ್ಲಿ ಯುವ ವಕೀಲರಿಗೆ ಅಪಾರ ಅವಕಾಶಗಳಿವೆ. ಸಾರ್ವಜನಿಕ ಸೇವೆಯ ಮೂಲಕ […]