ಪೆರುವಾಯಿ; ನದಿಗೆ ಬಿದ್ದ ಐದು ಜನ ಪ್ರಯಾಣಿಸುತ್ತಿದ್ದ ಕಾರು
ವಿಟ್ಲ ,ಜೂನ್.15 ಪೆರುವಾಯಿ ಮೂಲಕ ಹಾದು ಹೋಗಿರುವ ಅಂತಾರಾಜ್ಯ ಮುಖ್ಯ ರಸ್ತೆ ಅಪಘಾತದ ರಹದಾರಿಯಾಗಿದ್ದು, ವಾರದೊಳಗೆ ಒಂದೇ ಜಾಗದಲ್ಲಿ ಎರಡು ವಾಹನಗಳು ನದಿಗೆ ಬಿದ್ದಿವೆ. ರವಿವಾರ ರಾತ್ರಿ ಐವರು ಪ್ರಯಾಣಿಸುತ್ತಿದ್ದ ಕಾರು ನದಿಗೆ ಬಿದ್ದಿದ್ದು, ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೆರುವಾಯಿ ಗ್ರಾಮದ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಸೇತುವೆ ಈಗ ಸರಣಿ ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ. ನಿನ್ನೆ ರಾತ್ರಿ ಸುಮಾರು 11:30 ಗಂಟೆಗೆ ಐವರು ಪ್ರಯಾಣಿಸುತ್ತಿದ್ದ ಆಲ್ಟೋ ಕಾರೊಂದು ನಿಯಂತ್ರಣ ತಪ್ಪಿ ಇಲ್ಲಿನ ಕಿರಿದಾದ […]











