Tag: canaratv news

COMMUNITY NEWS LATEST NEWS

ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ನಲ್ಲಿ ಭಕ್ತಿ ಸಂಭ್ರಮದ ವಾರ್ಷಿಕ ಹಬ್ಬದ ಆಚರಣೆ

ಬಂಟ್ವಾಳ,ಜೂನ್.13: ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ನಲ್ಲಿ ಚರ್ಚ್‌ನ ಪಾಲಕ ಸಂತರಾದ ಸಂತ ಅಂತೋನಿಯವರ ವಾರ್ಷಿಕ ಹಬ್ಬವನ್ನು ಜೂನ್ 13 ಶನಿವಾರ ರಂದು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ನಡೆದ ಮಹಾ ಪವಿತ್ರ ಬಲಿಪೂಜೆ ಯನ್ನು ಬೆಂದೂರ್ ಸಂತ ಸೆಬಾಸ್ಟಿಯನ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಾಲ್ಟರ್ ಡಿಸೋಜಾ ವಹಿಸಿದ್ದರು. ಪ್ರವಚನ ನೀಡಿದ ಅವರು, “ನಾವು ಮಾಡುವ ದಾನ, ಧರ್ಮ ಮತ್ತು ಒಳ್ಳೆಯ ಕೆಲಸಗಳು ಪ್ರಚಾರಕ್ಕಾಗಿ ಇರಬಾರದು. ನಿಜವಾದ ದಾನವು ಹೃದಯದ […]

LATEST NEWS

2028 ರಲ್ಲಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ದ ಕ ಜಿಲ್ಲೆಯಲ್ಲಿ 6 ಸೀಟಿನ‌ಗುರಿ ಇದೆ ಶಾಸಕ ಅಶೋಕ್ ರೈ

ಪುತ್ತೂರು: ದೇಶದಲ್ಲಿ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ ,ದೇಶದ ವಿವಿಧ ರಾಜ್ಯಗಳಲ್ಲಿ ಮುಂದೇನಾಗುತ್ತದೋ ಎಂಬ ಭಯ ಅಲ್ಲಿ ನ ಜನರಲ್ಲಿದೆ ಆದರೆ ಕರ್ನಾಟಕದಲ್ಲಿ ಜನ ನೆಮ್ಮದಿಯಿಂದ ಇದ್ದಾರೆ ಇದಕ್ಕೆ ಕಾರಣ ಕರ್ನಾಟಕದ ಕಾಂಗ್ರೆಸ್ ಸರಕಾರವಾಗಿದ್ದು ಜನರು ಜೀವನಕ್ಕಾಗಿ ಏನು ಮಾಡಬೇಕೋ ಅದನ್ನು ಸರಕಾರ ಕೊಡುತ್ತಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಉಪ್ಪಿನಂಗಡಿ ರೋಟರಿ ಸಭಾ ಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ‌ಮಾತನಾಡಿದರು. ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ಕಾರ್ಯಕರ್ತರು‌ ಮನೆ ಮನ ಮುಟ್ಟಿಸುವ ಕೆಲಸ […]

LATEST NEWS

ಪೆರುವಾಯಿ ಶಾಲೆಯಲ್ಲಿ ಇವಿಎಂ ಮೂಲಕ ವಿದ್ಯಾರ್ಥಿ ಸಂಘದ ಚುನಾವಣೆ: ಗಗನರಾಜ್ ಮುಖ್ಯಮಂತ್ರಿ, ಖದೀಜತ್ ಶಿಫಾ ಉಪಮುಖ್ಯಮಂತ್ರಿ

ವಿಟ್ಲ,ಜೂನ್ 13: ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲತ್ತಡ್ಕ 2026-2027ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಬಾರಿಯ ಚುನಾವಣೆಯನ್ನು ಆಧುನಿಕ ಇವಿಎಂ (EVM) ಮಾದರಿಯಲ್ಲಿ ನಡೆಸಿರುವುದು ವಿಶೇಷವಾಗಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಸರದಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಮತದಾನ ಮುಗಿದ ತಕ್ಷಣವೇ ಮತ ಎಣಿಕೆ ಕಾರ್ಯ ಆರಂಭವಾಯಿತು. ಚುನಾವಣೆಯ ಫಲಿತಾಂಶದ ಪ್ರಕಾರ, 7ನೇ ತರಗತಿಯ ಗಗನರಾಜ್ […]

DAKSHINA KANNADA HOME LATEST NEWS

ವಿಟ್ಲ ತಾಲೂಕು ರಚನೆಗೆ ಆಗ್ರಹ: ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಹೋರಾಟ ಸಮಿತಿಯಿಂದ ಮನವಿ

ವಿಟ್ಲ, ಜೂನ್. 13; ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ತಾಲೂಕಾದ ಬಂಟ್ವಾಳವನ್ನು ವಿಭಜಿಸಿ, ಗಡಿನಾಡಿನ ಜನರ ಅನುಕೂಲಕ್ಕಾಗಿ ತಕ್ಷಣವೇ ‘ವಿಟ್ಲ ತಾಲೂಕು’ ರಚಿಸಬೇಕು ಎಂದು ಆಗ್ರಹಿಸಿ “ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಹೋರಾಟ ಸಮಿತಿ”ಯ ಪದಾಧಿಕಾರಿಗಳು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದ್ದಾರೆ. ವಿಟ್ಲ ತಾಲೂಕು ರಚನೆಯ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. 1973 ರಲ್ಲೇ ಶ್ರೀ ವಾಸುದೇವರಾವ್ ಸಮಿತಿಯು ವಿಟ್ಲ ತಾಲೂಕಿನ […]

LATEST NEWS

ಕಲಾಂಗಣದಲ್ಲಿ ರಾಜ್ಯ ಮಟ್ಟದ ಸಿಮೆಂಟ್‌ ಶಿಲ್ಪ ಶಿಬಿರ ಆರಂಭ

ಮಂಗಳೂರು, ಜೂನ್. 13 : ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಹಾಗೂ ಮಾಂಡ್ ಸೊಭಾಣ್‌ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಗರದ ಕಲಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ 15 ದಿನಗಳ ಸಿಮೆಂಟ್ ಶಿಲ್ಪಗಳ ರಚನಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾದ ಎಂ. ಸಿ. ರಮೇಶ್ ಅವರು, “ಇಂದಿನ ದಿನಗಳಲ್ಲಿ ಕೈ ಕಸುಬುಗಳು ನಶಿಸುತ್ತಿವೆ ಮತ್ತು ಕಲಾಶಾಲೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಲಾವಿದರಿಗೆ ನೆರವಾಗಲು ಅಕಾಡೆಮಿ ಹಲವು ಉತ್ತಮ ಅವಕಾಶಗಳನ್ನು ನೀಡುತ್ತಿದೆ,” ಎಂದರು. […]

COMMUNITY NEWS

ಮಂಗಳೂರು ಧರ್ಮಕ್ಷೇತ್ರದ ಪಾಲನಾ ಆಯೋಗಗಳ ಕಾರ್ಯದರ್ಶಿಗಳ ಸಭೆ

ಮಂಗಳೂರು, ಜೂನ್ 11:ಧರ್ಮಕ್ಷೇತ್ರ ವಿವಿಧ ಆಯೋಗಗಳ ಕೆಲಸಗಳನ್ನು ಪರಾಮರ್ಶಿಸಲು ಮತ್ತು ಒಗ್ಗಟ್ಟಿನ ಸೇವೆಯನ್ನು ಬಲಪಡಿಸಲು ಮಂಗಳೂರು ಧರ್ಮಕ್ಷೇತ್ರದ ಆಯೋಗಗಳ ಕಾರ್ಯದರ್ಶಿಗಳ ಸಭೆಯು ಜೂನ್ 11 ರಂದು ಬಿಷಪ್ ಹೌಸ್‌ನಲ್ಲಿ ನಡೆಯಿತು. “ಒಟ್ಟಿಗೆ ಮಿಷನ್‌ನಲ್ಲಿ, ಸಿನೊಡಲ್ ಮತ್ತು ಮಿಷನರಿ ಚರ್ಚ್ ನಿರ್ಮಾಣ” ಎಂಬ ಎಂಬ ಮುಖ್ಯ ಧ್ಯೇಯವಾಕ್ಯದೊಂದಿಗೆ ಈ ಸಭೆಯನ್ನು ಆಯೋಜಿಸಲಾಗಿತ್ತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಆದ ಪರಮ ಪೂಜ್ಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಾಸ್ಟರಲ್ ಕಮಿಷನ್ ಸಂಯೋಜಕರು ಮತ್ತು ಜುಡಿಶಿಯಲ್ […]

LATEST NEWS

ಕುದ್ರೋಳಿ ಭಗವತಿ ದೇವಸ್ಥಾನದಿಂದ ಕಟ್ಟೆಮಾರುವರೆಗೆ ರಸ್ತೆ ಅಗಲೀಕರಣ: ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಅಧಿಕಾರಿಗಳು ಸಭೆ

ಮಂಗಳೂರು, ಜೂನ್ 11: ನಗರದ ಕೊಡಿಯಾಲ್‌ ಬೈಲ್‌ನಲ್ಲಿರುವ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನ ದಿಂದ ಕಟ್ಟೆಮಾರುವರೆಗೆ ರಸ್ತೆ ಅಗಲೀಕರಣ ನಡೆಸುವ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿ ಗಳ ವಿಶೇಷ ಸಭೆಯು ಶಾಸಕ ಡಿ. ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಇಲ್ಲಿನ ರಸ್ತೆ ಅಗಲೀಕರಣವು ಸ್ಥಳೀಯ ನಾಗರಿಕರ ಹಲವಾರು ವರ್ಷಗಳ ಪ್ರಮುಖ ಬೇಡಿಕೆಯಾಗಿದೆ. ಈ ಹಿಂದೆ ಹಲವು ಜನಪ್ರತಿನಿಧಿಗಳು ಪ್ರಯತ್ನಿಸಿದರೂ ಇದು ಸಾಧ್ಯವಾಗಿರಲಿಲ್ಲ. ರಸ್ತೆಗಳು ಅಗಲವಾದರೆ ಸುತ್ತಮುತ್ತಲಿನ ಎಲ್ಲಾ […]

LATEST NEWS

ಬಾರ್ ಅಸೋಸಿಯೇಷನ್ ನೂತನ ಅಧ್ಯಕ್ಷ ಜಗದೀಶ್ ಶೇಣವ ಅವರಿಗೆ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಭವ್ಯ ಸನ್ಮಾನ

ಮಂಗಳೂರು, ಜೂನ್ 11: ಮಂಗಳೂರು ಬಾರ್ ಅಸೋಸಿಯೇಷನ್ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ವಕೀಲರಾದ ಶ್ರೀ ಜಗದೀಶ್ ಶೇಣವ ಅವರನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ದಕ್ಷಿಣ ಕನ್ನಡ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಅತ್ಯಂತ ಗೌರವದಿಂದ ಸನ್ಮಾನಿಸಲಾಯಿತು. ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪದಾಧಿಕಾರಿಗಳ ಪ್ರಮುಖ ಸಭೆಯ ಸಂದರ್ಭದಲ್ಲಿ ಈ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಶ್ರೀ ಜಗದೀಶ್ ಶೇಣವ ಅವರು ಕಾನೂನು ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಹಾಗೂ ಬಾರ್ […]

LATEST NEWS

ವೆನ್‌ಲಾಕ್ ಆಸ್ಪತ್ರೆಗೆ ಬರುವ ಬಡ ರೋಗಿಗಳೊಂದಿಗೆ ಕನ್ನಡದಲ್ಲೇ ವ್ಯವಹರಿಸಲು ಕಡ್ಡಾಯ ಸೂಚನೆ

ಮಂಗಳೂರು: ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಬಡವರು ಮತ್ತು ಸಾಮಾನ್ಯ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಲ್ಲಿಗೆ ಬರುವ ರೋಗಿಗಳಲ್ಲಿ ಶೇಕಡಾ 90 ರಷ್ಟು ಜನರಿಗೆ ಕನ್ನಡ ಮಾತ್ರ ತಿಳಿಯುತ್ತದೆ. ಅವರಿಗೆ ಬೇರೆ ಭಾಷೆಗಳ ಅರಿವಿರುವುದಿಲ್ಲ. ಆದರೆ, ಆಸ್ಪತ್ರೆಯ ಕೆಲವು ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಇಂಟರ್ನ್‌ಗಳು ರೋಗಿಗ ಳೊಂದಿಗೆ ಕನ್ನಡದಲ್ಲಿ ಮಾತನಾಡುತ್ತಿಲ್ಲ. ಇದರಿಂದ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯ ವಿಧಾನ ಮತ್ತು ಅವರ ಆರೋಗ್ಯದ ಪ್ರಗತಿಯ ಮಾಹಿತಿಯನ್ನು ವೈದ್ಯರು […]

LATEST NEWS

ಓಕ್ಕೆತ್ತೂರು ಶಾಲೆಯಲ್ಲಿ ‘ಹಸಿರೇ ಉಸಿರು’ ವನಮಹೋತ್ಸವ ಮತ್ತು ಗಿಡ ವಿತರಣೆ

ಬಂಟ್ವಾಳ ಜೂನ್ 10 : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಓಕ್ಕೆತ್ತೂರಿನಲ್ಲಿ “ಹಸಿರೇ ಉಸಿರು” ಎಂಬ ಧ್ಯೇಯ ವಾಕ್ಯದೊಂದಿಗೆ ವನಮಹೋತ್ಸವ ಹಾಗೂ ಗಿಡ ವಿತರಣಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿ ಸತೀಶ್ ಲುಕ್ ಅವರು ಗಿಡ ನೆಡುವ ಮೂಲಕ ನೆರವೇರಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಪರಿಸರ ಮತ್ತು ಮಾನವ ಕುಲಕ್ಕೆ ಅವಿನಾಭಾವ ಸಂಬಂಧವಿದೆ. ಪರಿಸರ ನಾಶವಾದರೆ ಅದರ ದುಷ್ಪರಿಣಾಮವನ್ನು ಇಡೀ ಮಾನವ ಕುಲವೇ ಅನುಭವಿಸಬೇಕಾಗುತ್ತದೆ. ಆದ್ದರಿಂದ […]