ಬಂಟ್ವಾಳ: ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರವಾಗಿ ಸ್ಪಂದಿಸಿ, ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರ ಶಿಫಾರಸ್ಸಿನ ಮೇರೆಗೆ ಸಜಿಪಮೂಡ ಗ್ರಾಮದ ಕೊಳಕೆ–ಪಂಜಾಜೆ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ಅವರು ನೆರವೇರಿಸಿದರು.

ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ನ ನಿಧಿಯ ಅನುದಾನದ ಮೂಲಕ ಸುಮಾರು ₹5 ಲಕ್ಷ ವೆಚ್ಚದಲ್ಲಿ ಈ ರಸ್ತೆ ಕಾಂಕ್ರೀಟೀಕರಣಗೊಳಿಸಲಾಗಿದೆ. ಹಲವು ವರ್ಷಗಳಿಂದ ಸ್ಥಳೀಯರು ಎದುರಿಸುತ್ತಿದ್ದ ರಸ್ತೆ ಸಮಸ್ಯೆಗೆ ಸ್ಪಂದಿಸಿ, ಕಾಮಗಾರಿಗೆ ಅನುದಾನ ಒದಗಿಸುವಲ್ಲಿ ಬಿ. ರಮಾನಾಥ ರೈ ಅವರು ಪ್ರಮುಖವಾಗಿ ಸಹಕರಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗ್ರಾಮೀಣ ಭಾಗಗಳ ರಸ್ತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಇತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದ್ದು, ಜನರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಬಿ. ರಮಾನಾಥ ರೈ ಅವರು ಈ ಸಂದರ್ಭದಲ್ಲಿ ಹೇಳಿದರು.

ಈ ಕಾಮಗಾರಿಗೆ ಸಹಕಾರ ನೀಡಿದ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಶೋಭಿತ್ ಪೂಂಜಾ, ಮಾಜಿ ಉಪಾಧ್ಯಕ್ಷ ಎಸ್. ಸಿದ್ದೀಕ್, ಮಾಜಿ ಸದಸ್ಯರಾದ ಹಮೀದ್, ಯೋಗೀಶ್ ಬೆಳ್ಚಡ ಹಾಗೂ ಪ್ರಮೀಳಾ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ರಸ್ತೆ ಕಾಂಕ್ರೀಟೀಕರಣದಿಂದ ಕೊಳಕೆ–ಪಂಜಾಜೆ ಭಾಗದ ಗ್ರಾಮಸ್ಥರಿಗೆ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಿದ್ದು, ಮಳೆಗಾಲದಲ್ಲಿ ಎದುರಾಗುತ್ತಿದ್ದ ಸಂಚಾರದ ಸಮಸ್ಯೆಗೂ ಪರಿಹಾರ ದೊರೆತಂತಾಗಿದೆ. ಜನರ ಅಗತ್ಯಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಸಾಕಾರಗೊಳಿಸುವಲ್ಲಿ ರಮಾನಾಥ ರೈ ಅವರ ಪಾತ್ರವನ್ನು ಸ್ಥಳೀಯರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ್ ಭಂಡಾರಿ ಅಧ್ಯಕ್ಷರು, ಪಾಣೆಮಂಗಳೂರು ಬ್ಲಾಕ್,ಸುದೀಪ್ ಕುಮಾರ್ ಶೆಟ್ಟಿ ಮಾಜಿ ಅಧ್ಯಕ್ಷರು ಪಾಣೆಮಂಗಳೂರು ಬ್ಲಾಕ್ ,ಶೈಲೇಶ್ ಕುಮಾರ್ ಅಧ್ಯಕ್ಷರು ವಲಯ ಕಾಂಗ್ರೆಸ್ ಸಜೀಪ ಮೂಡ,ಸ್ಟಿವನ್ ಡಿಸೋಜಾ ಪ್ರಧಾನ ಕಾರ್ಯದರ್ಶಿ ಪಾಣೆಮಂಗಳೂರು ಬ್ಲಾಕ್,ರಮೇಶ್ ಎಂ. ಪಣೋಲಿಬೈಲ್ ಉಪಾಧ್ಯಕ್ಷರು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್,ಸಜೀಪಮೂಡ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀದೇವಿ ಪ್ರಸಾದ್ ಪೂಂಜ ಮಾಜಿ ಅಧ್ಯಕ್ಷರು ಸಜೀಪಮೂಡ ಗ್ರಾಮ ಪಂಚಾಯತ್,S. ಸಿದ್ದಿಕ್ ಕೊಳಕೆ ಮಾಜಿ ಉಪಾಧ್ಯಕ್ಷರು ಸಜೀಪಮೂಡ ಗ್ರಾಮ ಪಂಚಾಯತ್,ಹಮೀದ್ ಕೊಳಕೆ ಮಾಜಿ ಸದಸ್ಯರು ಸಜೀಪಮೂಡ ಗ್ರಾಮ ಪಂಚಾಯತ್,ವಿಶ್ವನಾಥ್ ಬೆಲ್ಚಡ ಮಾಜಿ ಸದಸ್ಯರು ಸಜೀಪಮೂಡ ಗ್ರಾಮ ಪಂಚಾಯತ್,ಯೋಗೀಶ್ ಬೆಲ್ಚಡ ಮಾಜಿ ಸದಸ್ಯರು ಸಜೀಪಮೂಡ ಗ್ರಾಮ ಪಂಚಾಯತ್,ಕರೀಮ್ ಬೊಲ್ಲಯಿ ಮಾಜಿ ಸದಸ್ಯರು ಸಜೀಪ ಮೂಡ ಗ್ರಾಮ ಪಂಚಾಯತ್ ,ಕರೀಮ್ ಹಾಜಿ ಕೊಳಕೆ ,ಫಾರೂಕ್ ಕೊಳಕೆ ಪ್ರಧಾನ ಕಾರ್ಯದರ್ಶಿ ಮುಹಿಯದ್ದಿನ್ ಜುಮಾ ಮಸೀದಿ ಕೊಳಕೆ ,ಕಾಸಿಂ ಮಂಜ ನಾಡಿ ಯುವ ಉದ್ಯಮಿ ಮುಂಬೈ ,ಸುರೇಶ್ ಕೊಳಕೆ ,ಇಸ್ಮಾಯಿಲ್ ಪಂಜಾಜೆ,ಸೀತಾರಾಮ ಶೆಟ್ಟಿ ಅಧ್ಯಕ್ಷರು ಕಿಸಾನ್ ಘಟಕ ಪಾಣೆಮಂಗಳೂರು,ಸಬೀರ್ ಕೊಳಕೆ ಸಾಮಾಜಿಕ ಕಾರ್ಯಕರ್ತ ಉಪಸ್ಥಿತರಿದ್ದರು.
