ಮಂಗಳೂರು : ಕನ್ಯಾಮರಿಯಮ್ಮನವರ ಜನನ ಹಬ್ಬವನ್ನು (ಜನಪ್ರಿಯವಾಗಿ ‘ಮೊಂತಿ ಫೆಸ್ಟ್’) ಸೆಪ್ಟೆಂಬರ್ 8 ರಂದು ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಸಾಂಪ್ರದಾಯಿಕ ಸಡಗರ ಹಾಗೂ ಭಕ್ತಿಯಿಂದ ಆಚರಿಸಲಾಯಿತು.ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಹಬ್ಬದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿದ್ದರು.
ಬಲಿಪೂಜೆಯ ಸಂದರ್ಭದಲ್ಲಿ ನೆರೆದಿದ್ದ ಭಕ್ತಾದಿಗಳು ಹಾಗೂ ಆಶ್ರಮದ ನಿವಾಸಿಗಳನ್ನು ಉದ್ದೇಶಿಸಿ ಪ್ರವಚನ ನೀಡಿದ ಬಿಷಪ್ ಸಲ್ಡಾನ್ಹಾ ಅವರು, ಕನ್ಯಾಮರಿಯಮ್ಮನವರ ಸದ್ಗುಣಗಳನ್ನು ಸ್ಮರಿಸಿದರು. ಧರ್ಮಸಭೆಯ ಮಾತೆಯಾಗಿ ಮತ್ತು ಅಚಲ ನಂಬಿಕೆಯ ಮಾದರಿಯಾಗಿ ಅವರ ಪಾತ್ರವನ್ನು ಬಣ್ಣಿಸಿದರು. ಈ ಹಬ್ಬದ ಸಾಂಸ್ಕೃತಿಕ ಮತ್ತು ಕೌಟುಂಬಿಕ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, “ಮೊಂತಿ ಫೆಸ್ಟ್ ಹೆಣ್ಣು ಮಗುವನ್ನು ಗೌರವಿಸುವ ಮತ್ತು ಭೂಮಿಯ ಸಮೃದ್ಧ ಫಸಲನ್ನು ಆಚರಿಸುವ ವಿಶಿಷ್ಟ ಹಬ್ಬವಾಗಿದೆ. ಇದು ಮೂಲತಃ ಕೌಟುಂಬಿಕ ಹಬ್ಬವಾಗಿದ್ದು, ಕೃತಜ್ಞತೆಯಿಂದ ಒಗ್ಗೂಡಲು ಮತ್ತು ಮಾತೆ ಮರಿಯಮ್ಮನವರ ಪ್ರೀತಿ ಹಾಗೂ ವಿನಯದ ಬೆಳಕಿನಲ್ಲಿ ನಮ್ಮ ಕೌಟುಂಬಿಕ ಬಾಂಧವ್ಯಗಳನ್ನು ನವೀಕರಿಸಲು ನಮ್ಮನ್ನು ಕರೆಯುತ್ತದೆ,” ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳು ಹೊಸ ಭತ್ತದ ತೆನೆಗಳ (ನೊವೆಂ) ಸಾಂಪ್ರದಾಯಿಕ ಆಶೀರ್ವಾದ ಮತ್ತು ಮಾತೆ ಮರಿಯಮ್ಮನವರಿಗೆ ಮಕ್ಕಳಿಂದ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊಂಡವು.
ಬಲಿಪೂಜೆಯಲ್ಲಿ ಸಂತ ಅಂತೋನಿ ಆಶ್ರಮದ ನಿರ್ದೇಶಕರಾದ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ, ಆಡಳಿತಾಧಿಕಾರಿ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್ ಮತ್ತು ವಂದನೀಯ ಫಾದರ್ ಎಫ್.ಎಕ್ಸ್. ಗೋಮ್ಸ್ ಅವರು ಸಹ-ಯಾಜಕರಾಗಿ ಪಾಲ್ಗೊಂಡಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು, ಹಿತೈಷಿಗಳು ಹಾಗೂ ಆಶ್ರಮದ ನಿವಾಸಿಗಳು ಬಲಿಪೂಜೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಹಾಗೂ ಕೃತಜ್ಞತಾ ಸಮರ್ಪಣೆಯಲ್ಲಿ ಒಗ್ಗೂಡಿದರು. ಹಬ್ಬದ ಸಂಭ್ರಮಾಚರಣೆಯು ಕರಾವಳಿಯ ಕ್ಯಾಥೊಲಿಕ್ ಸಂಪ್ರದಾಯದಂತೆ ಆಶೀರ್ವದಿಸಿದ ಭತ್ತದ ತೆನೆಗಳು ಹಾಗೂ ಕಬ್ಬನ್ನು ನೆರೆದಿದ್ದ ಎಲ್ಲಾ ಭಕ್ತರಿಗೆ ವಿತರಿಸುವ ಮೂಲಕ ಮುಕ್ತಾಯಗೊಂಡಿತು.ಕರಾವಳಿಯಲ್ಲಿ ಸೌಹಾರ್ದತೆಯ ‘ಮೊಂತಿ ಫೆಸ್ತ್’ ಸಡಗರ:
ಕರಾವಳಿ ಜಿಲ್ಲೆಗಳ ಕೆಥೋಲಿಕ್ ಸಮುದಾಯದ ಅತ್ಯಂತ ಪವಿತ್ರ ಹಾಗೂ ಸಂಸ್ಕ್ರತಿ ಬೆಸೆಯುವ ಹಬ್ಬವಾದ ‘ಮೊಂತಿ ಫೆಸ್ತ್’ (ಮರಿಯಮ್ಮನವರ ಜನ್ಮದಿನೋತ್ಸವ ಹಾಗೂ ಹೊಸ ತೆನೆ ಹಬ್ಬ) ಜಿಲ್ಲೆಯಾದ್ಯಂತ ಭಕ್ತಿ, ಶ್ರದ್ಧೆ ಮತ್ತು ಕೌಟುಂಬಿಕ ಸೌಹಾರ್ದತೆಯೊಂದಿಗೆ ಆಚರಿಸಲಾಗುತ್ತಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೂರಾರು ಚರ್ಚ್ಗಳಲ್ಲಿ ಮುಂಜಾನೆಯಿಂದಲೇ ಸಹಸ್ರಾರು ಭಕ್ತಾದಿಗಳು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಮಂಗಳೂರು ಮಿಲಾಗ್ರೆಸ್ ಚರ್ಚ್ ನಲ್ಲಿ (ಮೋಂತಿಫೆಸ್ತ್) ತೆನೆ ಹಬ್ಬ ವನ್ನು ಆಚರಿಸಲಾಯಿತು ಮಾತೆ ಮರಿ ಯಮ್ಮನವರಿಗೆ , ಮಕ್ಕಳು ಮಾತೆಗೆ ಹೂಗಳನ್ನು ಅರ್ಪಿಸಿದರು ಬಳಿಕ ಹೊಸ ತೆನೆಯ ಆಶೀರ್ವಚನ ನಂತರ ಚರ್ಚ್ ನಲ್ಲಿ ಹಬ್ಬದ ಬಲಿಪೂಜೆಯನ್ನು ವಂ|ಫಾll ಐವನ್ ರೋಡ್ರಿ ಗಸ್ ಬಲಿಪೂಜೆ ನೆರವೇರಿಸಿದರು ಧರ್ಮಗುರುಗಳಾದ ವಂ|ಫಾ ಅಲ್ವಿನ್ ಸೆರಾವೋ , ಫಾll ಉದಯ್ ಫೆರ್ನಾಂಡಿಸ್, ಫಾ ll ಅವಿತ್ ಪಾಯ್ಸ್, ಫಾll ಜೆರಾಲ್ಡ್ ಪಿಂಟೋ, ಮತ್ತು ಕ್ರೈಸ್ತ ಬಾಂದವರು ಬಲಿಪೂಜೆಯಲ್ಲಿ ಭಾಗವಹಿಸಿದರು ಬಲಿ ಪೂಜೆ ನಂತರ ಭತ್ತ ದ ತೆನೆ, ಕಬ್ಬು ಮತ್ತು ಸಿಹಿ ತಿಂಡಿ ಗಳನ್ನು ವಿತರಿಸಲಾಯಿತು.



ಪೆರುವಾಯಿ ಫಾತಿಮಾ ಮಾತೆಯ ಚರ್ಚ್ ನಲ್ಲಿ . ಕೆನರಾ ಕಮ್ಯೂನಿಕೇಷನ್ ನ ನಿರ್ದೇಶಕ ವಂ. ಅನಿಲ್ ಐವನ್ ಫೆರ್ನಾಂಡಿಸ್ ಅವರು ಪ್ರಧಾನ ಯಾಜಕರಾಗಿ ಬಲಿಪೂಜೆ ಅರ್ಪಿಸಿದರು. ಧರ್ಮಗುರು ವಂ. ಸೈಮನ್ ಡಿಸೋಜ, ಬ್ರದರ್ ಪ್ರಿತೇಶ್ ಪಿಂಟೊ ಸಹಕರಿಸಿದರು.
ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ ಉಪಸ್ಥಿತರಿದ್ದರು

