• Home  
  • ಕೆಂಪು ಕಲ್ಲು ಗಣಿಗಾರಿಕೆ: ಅರ್ಜಿ ಹಾಕಿದವರಿಗೆ ತಕ್ಷಣ ಲೈಸನ್ಸ್ ಮಂಜೂರು ಮಾಡಿ: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹ
- DAKSHINA KANNADA - HOME - LATEST NEWS

ಕೆಂಪು ಕಲ್ಲು ಗಣಿಗಾರಿಕೆ: ಅರ್ಜಿ ಹಾಕಿದವರಿಗೆ ತಕ್ಷಣ ಲೈಸನ್ಸ್ ಮಂಜೂರು ಮಾಡಿ: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹ

ಮಂಗಳೂರು: ನ 15: ಕೆಂಪು ಕಲ್ಲು ಗಣಿಗಾರಿಕೆಯ ಬಗೆಗಿನ ಗೊಂದಲಕ್ಕೆ ಸರಕಾರ ಪರಿಹಾರವನ್ನು ನೀಡಿದೆ, ಈಗ ಎಲ್ಲಾ ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಪರವಾನಗಿ ಹೊಮದಿರುವವರು ಈಗಾಗಲೇ ಗಣಿಗಾರಿ ಆರಂಭ ಮಾಡಿದ್ದಾರೆ. ಈಗ ಎಲ್ಲೂ ಕಲ್ಲಿನ ಕೊರತೆ ಇಲ್ಲ ಆದರೆ ಗಣಿಗಾರಿಗೆ ಪರವಾನಿಗೆ ಕೋರಿ ಅರ್ಜಿ ಹಾಕಿದವರಿಗೆ ತಕ್ಷಣ ಪರವಾನಿಗೆ ನೀಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಕೆಡಿಪಿ ಸಭೆಯಲ್ಲಿ ಆಗ್ರಹ ಮಾಡಿದರು.

ಸಭೆಯು ಜಿಪಂ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕಲ್ಲು ಗಣಿಗಾರಿಕೆ ವಿಚಾರ ಬಂದಾಗ ಸಭೆಯ ಗಮನ ಸೆಳೆದ ಶಾಸಕರು ಈಗಾಗಲೇ 16 ಅರ್ಜಿಗಳು ಬಾಕಿ ಇದೆ ಎಂಬ ಮಾಹಿತಿ ಇದೆ. ಬಾಕಿ ಇರುವ ಅರ್ಜಿದಾರರಿಗೆ ಕೂಡಲೇ ಲೈಸೆನ್ಸ್ ಮಂಜೂರು‌ಮಾಡಿ ಎಂದು ಆಗ್ರಹಿಸಿದರು. 10 ದಿನದೊಳಗೆ ಲೈಸೆನ್ಸ್ ಮಂಜೂರು ಮಾಡುವಂತೆ ಸಚಿವರು ಸೂಚನೆ ನೀಡಿದರು.

ಕಲ್ಲು ಗಣಿಗಾರಿಕೆ ಗೆ ಸರಕಾರ ಪರವಾನಗಿ ನೀಡಿದರೂ ಕಲ್ಲುಗಳು ದಾರಾಳವಾಗಿ ಸಾಗಾಟವಾಗುತ್ತಿದ್ದರೂ ಕಲ್ಲಿನ ಬೆಲೆ ಕಡಿಮೆಯಾಗಿಲ್ಲ. ಸದ್ಯ ಒಂದು ಕಲ್ಲಿಗೆ 40 ರಿಂದ 45 ದರ ಪಡೆಯುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕಾದರೆ ಜಿಲ್ಲಾಡಳಿತ ಕಲ್ಲು ಗಣಿಗಾರಿಕೆಗೆ ಪರವಾನಿಗೆ ಹೆಚ್ಚಿಸಬೇಕು ಎಂದು ಶಾಸಕರು ಅಭಿಪ್ರಾಯಿಸಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678