ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿ, ಐವರು ಸೇವಾದರ್ಶಿಗಳು ಪರಮ ಪೂಜ್ಯ ಡಾ| ಪೀಟರ್ ಪಾವ್ಕ್ ಸಲ್ಮಾನ್ಯಾ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಇವರಿಂದ ಯಾಜಕ ದೀಕ್ಷೆಯನ್ನು ಪಡೆದರು. ಈ ಪವಿತ್ರ ಸಮಾರಂಭವು 2026ರ ಏಪ್ರಿಲ್ 16, ಗುರುವಾರದಂದು ಕುಲಶೇಖರದ ಪವಿತ್ರ ಶಿಲುಬೆ ಚರ್ಚ್ ನಲ್ಲಿ (Cordel Church) ಅತ್ಯಂತ ಭಕ್ತಿಭಾವದಿಂದ ಜರುಗಿತು.
ಈ ಸಂಭ್ರಮದ ಬಲಿಪೂಜೆಯಲ್ಲಿ ಧರ್ಮಕ್ಷೇತ್ರದ ಶ್ರೇಷ್ಠಗರುಗಳಾದ ವಂ| ಮ್ಯಾಕ್ಸಿಮ್ ಎಲ್. ನೊರೊನ್ಹಾ ಧಾರ್ಮಿಕರ ಪಾಲನಾ ವಿಕಾರ್ ವಂ। ಡಾ| ಡೇನಿಯಲ್ ವೀಗಾಸ್ OP, ಜಪ್ಪು ಸೆಮಿನರಿಯ ರೆಕ್ಸರ್ ವಂ| ಡಾ| ರಾಜೇಶ್ ರೊಸಾರಿಯೋ, ಜುಡಿಶಿಯಲ್ ವಿಕಾರ್ ವಂ| ನವೀನ್ ಪಿಂಟೋ, ಪಾಲನ ಕೇಂದ್ರದ ನಿರ್ದೇಶಕ ವಂ| ಸಂತೋಷ್ ರೊಡ್ರಿಗಸ್ ಮತ್ತು ಕುಲಶೇಖರ ಚರ್ಚ್ನ ಧರ್ಮಗುರು ವಂ| ಕ್ಲಿಫರ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ನೂರಾರು ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಪವಿತ್ರ ವಿಧಿಗೆ ಸಾಕ್ಷಿಯಾದರು.
ಬಿಷಪ್ರ ಪ್ರಬೋಧನೆ: ಯಾಜಕತ್ವವು ದೇವರ ಕೊಡುಗೆ ಮತ್ತು ರಹಸ್ಯ ತಮ್ಮ ಪ್ರಬೋಧನೆಯಲ್ಲಿ ಪರಮ ಪೂಜ್ಯ ಡಾ| ಪೀಟರ್ ಪಾವ್ನ್ ಸಲ್ಮಾನ್ಹಾ ಅವರು ಯಾಜಕತ್ವದ ಆಧ್ಯಾತ್ಮಿಕ ಆಯಾಮಗಳನ್ನು ವಿವರಿಸಿದರು. ಯಾಜಕತ್ವವು ಕೇವಲ ಮಾನವ ಅರ್ಹತೆಯಲ್ಲ ಬದಲಾಗಿ ಅದು ದೇವರ ಅಪಾರ ಪ್ರೀತಿಯಿಂದ ಬಂದ “ದೈವಿಕ ಕೊಡುಗೆ ಮತ್ತು ರಹಸ್ಯ” ಎಂದು ಅವರು ತಿಳಿಸಿದರು. ನೂತನ ಯಾಜಕರು ಸದಾ ಪ್ರಾರ್ಥನೆ ಮತ್ತು ದೇವರ ಕೃಪೆಯ ಮೇಲೆ ಅವಲಂಬಿತರಾಗಿ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು. ಅಲ್ಲದೆ, ಭಕ್ತಾದಿಗಳು ತಮ್ಮ ದೈನಂದಿನ ಜೀವನದಲ್ಲಿ ಯಾಜಕರಿಗೆ ಪ್ರಾರ್ಥನೆಯ ಬೆಂಬಲ ನೀಡಬೇಕೆಂದು ಅವರು ವಿನಂತಿಸಿದರು.
ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ವಂ। ರೋಹಿತ್ ಡಿಕೋಸ್ತಾ ಮತ್ತು ಸೆಮಿನರಿ ವಿದ್ಯಾರ್ಥಿಗಳು ದಿವ್ಯ ಬಲಿಪೂಜೆಯ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ವಂ! ಕ್ಲಿಫರ್ಡ್ ಫೆರ್ನಾಂಡಿಸ್ ಸಮಾರಂಭದ ವ್ಯವಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸಿದರು.
ಸನ್ಮಾನ ಮತ್ತು ಕೃತಜ್ಞತೆ ಬಲಿಪೂಜೆಯ ನಂತರ ನಡೆದ ಕಿರು ಸನ್ಮಾನ ಕಾರ್ಯಕ್ರಮದಲ್ಲಿ ವಂ| ಪ್ಲೇವಿಯನ್ ಲೋಬೋ ಅವರು ನೂತನ ಯಾಜಕರನ್ನು ಮತ್ತು ಅವರ ಪೋಷಕರನ್ನು ಪರಿಚಯಿಸಿ ಗೌರವಿಸಿದರು. ಬಿಷಪ್ ಅವರು ಪ್ರತಿಯೊಬ್ಬನೂತನ ಯಾಜಕರನ್ನು ಅಭಿನಂದಿಸಿ, ಅವರ ಪೋಷಕರಿಗೆ ಹೂಗುಚ್ಛ ನೀಡಿ ಗೌರವಿಸಿದರು.
ನೂತನ ಯಾಜಕರ ಪರವಾಗಿ ವಂ| ಜೀವನ್ ಡಿಸೋಜಾ ಅವರು ಬಿಷಪ್, ತರಬೇತುದಾರರು, ಪೋಷಕರು ಮತ್ತು ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಬಿಷಪ್ ಅವರು ತಮ್ಮ ಸಮಾರೋಪ ಭಾಷಣದಲ್ಲಿ “ದೇವರು ನಮ್ಮ ಧರ್ಮಕ್ಷೇತ್ರಕ್ಕೆ ಐವರು ನೂತನ ಯಾಜಕರನ್ನು ನೀಡಿದ್ದಾರೆ. ಇವರು ದೈವದ ಕರೆಗೆ ಓಗೊಟ್ಟು ಧರ್ಮಸಭೆಯ ಸೇವೆಗೆ ಮುಂದಾಗಿದ್ದಾರೆ,” ಎಂದು ಹಾರೈಸಿದರು.1. ವಂ| ಅವಿಲ್ ಸಂತಮಯೋರ್: ಶಿರ್ತಾಡಿ ಪವಿತ್ರ ಮೌಂಟ್ ಕಾರ್ಮೆಲ್ ಚರ್ಚ್ ನಿವಾಸಿಯಾದ ಇವರು ಚಾರ್ಲ್ಸ್ ಸಂತಮಯೋರ್ ಮತ್ತು ಆಂಜೆಲಿನ್ ಕ್ರಾಸ್ತಾ ದಂಪತಿಗಳ ಪುತ್ರ. ಬಿ.ಎಸ್.ಡಬ್ಲ್ಯೂ ಪದವೀಧರರಾದ ಇವರು ಮೊಗರ್ನಾಡು ಚರ್ಚ್ ನಲ್ಲಿ ಸೇವಾದರ್ಶಿ ಸೇವೆ ಸಲ್ಲಿಸಿದ್ದರು.2. ವಂ| ಡೆನ್ನಿಲ್ ರೊಡ್ರಿಗಸ್: ನೈನಾಡ್ ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚ್ನ ಇವರು ಡೆನಿಸ್ ಮತ್ತು ಎಲಿಜಾ ರೊಡ್ರಿಗಸ್ ಅವರ ಪುತ್ರ. ಇವರೊಬ್ಬ ಬಿ.ಎಸ್.ಡಬ್ಲ್ಯೂ ಪದವೀಧರರು. ಇವರು ಕುಲಶೇಖರ ಚರ್ಚ್ನಲ್ಲಿ ಸೇವಾದರ್ಶಿ ಸೇವೆ ಸಲ್ಲಿಸಿದ್ದರು.3. ವಂ| ಜೀವನ್ ಡಿಸೋಜಾ: ಬೇಳಾ ಚರ್ಚ್ ಜಾನ್ ಮತ್ತು ಐರಿನ್ ಡಿಸೋಜಾ ದಂಪತಿಗಳ ಪುತ್ರ. ಇವರು ಕುಲಶೇಖರ ಚರ್ಚ್ನಲ್ಲಿ ಸೇವಾದರ್ಶಿಯಾಗಿ ಸೇವೆ ಸಲ್ಲಿಸಿದ್ದರು.4. ವಂ| ಜೋಯಲ್ ಮೊಂಟೇರೊ: ಕುಲಶೇಖರ ಚರ್ಚ್ನ ವಿಕ್ಸರ್ ಜಾನ್ ಮತ್ತು ಪ್ರಮಿಳಾ ಮೊಂಟೇರೊ ದಂಪತಿಗಳ ಪುತ್ರ. ಕಲಾವಿದ ಮತ್ತು ಸಂಗೀತಗಾರರಾದ ಇವರು ಬಜಾಲ್ ಚರ್ಚ್ನಲ್ಲಿ ಸೇವೆ ಸಲ್ಲಿಸಿದ್ದರು.5. ವಂ| ಲಾಯ್ಡ್ ರೋಹನ್ ಡಿಸೋಜಾ: ಮಡಂತ್ಯಾರು ಚರ್ಚ್ನ ಲಾರೆನ್ಸ್ ಮತ್ತು ರೀಟಾ ಡಿಸೋಜಾ ದಂಪತಿಗಳ ಪುತ್ರ. ಬಿ.ಎ ಪದವೀಧರರಾದ ಇವರು ಗುರುಪುರ ಚರ್ಚ್ನಲ್ಲಿ ಸೇವಾದರ್ಶಿ ಸೇವೆ ಸಲ್ಲಿಸಿದ್ದರು.




















- COMMUNITY NEWS
- LATEST NEWS
ಮಂಗಳೂರು ಧರ್ಮಕ್ಷೇತ್ರಕ್ಕೆ ಐವರು ನೂತನ ಯಾಜಕರ ಸೇರ್ಪಡೆ: ಕುಲಶೇಖರ ಚರ್ಚ್ನಲ್ಲಿ ಭವ್ಯ ದೀಕ್ಷಾ ಪ್ರದಾನ ಸಮಾರಂಭ
ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿ, ಐವರು ಸೇವಾದರ್ಶಿಗಳು ಪರಮ ಪೂಜ್ಯ ಡಾ| ಪೀಟರ್ ಪಾವ್ಕ್ ಸಲ್ಮಾನ್ಯಾ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಇವರಿಂದ ಯಾಜಕ ದೀಕ್ಷೆಯನ್ನು ಪಡೆದರು. ಈ ಪವಿತ್ರ ಸಮಾರಂಭವು 2026ರ ಏಪ್ರಿಲ್ 16, ಗುರುವಾರದಂದು ಕುಲಶೇಖರದ ಪವಿತ್ರ ಶಿಲುಬೆ ಚರ್ಚ್ ನಲ್ಲಿ (Cordel Church) ಅತ್ಯಂತ ಭಕ್ತಿಭಾವದಿಂದ ಜರುಗಿತು.ಈ ಸಂಭ್ರಮದ ಬಲಿಪೂಜೆಯಲ್ಲಿ ಧರ್ಮಕ್ಷೇತ್ರದ ಶ್ರೇಷ್ಠಗರುಗಳಾದ ವಂ| ಮ್ಯಾಕ್ಸಿಮ್ ಎಲ್. ನೊರೊನ್ಹಾ ಧಾರ್ಮಿಕರ ಪಾಲನಾ ವಿಕಾರ್ ವಂ। ಡಾ| ಡೇನಿಯಲ್ ವೀಗಾಸ್ OP, […]

