Tag: canaratv

DAKSHINA KANNADA HOME LATEST NEWS

ಉಳ್ಳಾಲ: ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನ ಕಳವು

ಮಂಗಳೂರು: ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರೋರ್ವರ 16 ಗ್ರಾಂ ತೂಕದ ಚಿನ್ನ ಕಳವಾದ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ ಸ್ವರ್ಷ ಎಂಬುವವರು ಜ.17 ರಂದು ಉಳ್ಳಾಲ ತಾಲೂಕಿನ ಉಳ್ಳಾಲ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಇರುವ ಕೆಥೋಲಿಕ್ ಪ್ರಾಥಮಿಕ ಸಹಕಾರ ಸಂಘದಲ್ಲಿ ಲಾಕರ್ ನಲ್ಲಿ ಇಟ್ಟಿದ್ದ 2 ಚಿನ್ನದ ಸರವನ್ನು ಬಿಡಿಸಿಕೊಂಡು ಬ್ಯಾಗ್ ನಲ್ಲಿ ಹಾಕಿ ಬಂದಿದ್ದರು. ನಂತರ ಸುಮಾರು 12 ಗಂಟೆ ಸುಮಾರಿಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ […]

DAKSHINA KANNADA HOME LATEST NEWS

ಮುಲ್ಕಿ ಜೋಡಿ ಕೊಲೆ ಪ್ರಕರಣ: ಆರೋಪಿ ಅಲ್ಫೋನ್ಸ್ ಸಲ್ದಾನಗೆ ಜೀವಾವಧಿ ಶಿಕ್ಷೆ

ಮಂಗಳೂರು: ಮುಲ್ಕಿ ತಾಲೂಕಿಮ ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಆಗಿಂದಕಾಡು ಎಂಬಲ್ಲಿ ನಡೆದ ಜೋಡಿಕೊಲೆ ಪ್ರಕರಣದ ಆರೋಪಿ ಅಲ್ಫೋನ್ಸ್ ಸಲ್ದಾನ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ. ಘಟನೆ ವಿವರ ಮುಲ್ಕಿ ತಾಲೂಕು ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಆಗಿಂದಕಾಡು ಎಂಬಲ್ಲಿ  2020ರ ಏ.29 ರಂದು ಆರೋಪಿ ಆಲ್ಫೋನ್ಸ್ ಸಲ್ದಾಣನು ತನ್ನ ನೆರೆಕರೆ ಮನೆಯ ವಿನ್ಸಿ ಯಾನೆ ವಿನ್ಸೆಂಟ್ ಡಿ.ಸೋಜಾನನ್ನು ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ […]

LATEST NEWS

ಸೇಂಟ್ ಅಲೋಶಿಯಸ್ ಶಾಲೆಯಿಂದ ನಾಳೆ ಅಂತರ್ಗತ “ಅಲೋಯ್ ಕ್ವಿಜ್-ವಿಜ್ 2026”

ಮಂಗಳೂರು: ನಗರದ ಸೇಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅದರ ಹಳೆಯ ವಿದ್ಯಾರ್ಥಿ ಸಂಘವು (SACAA ನ ಒಂದು ಭಾಗ), ವಿದ್ಯಾರ್ಥಿಗಳಿಗಾಗಿ ನವೀನ ಮತ್ತು ಅಂತರ್ಗತ ರಸಪ್ರಶ್ನೆ ಕಾರ್ಯಕ್ರಮವಾದ “ಅಲೋಯ್ ಕ್ವಿಜ್-ವಿಜ್ 2026” ಅನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಜನವರಿ 18, 2026 ರ ಭಾನುವಾರದಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಶಾಲಾ ಆವರಣದಲ್ಲಿ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸಭಾಪತಿಗಳಾದ ಶ್ರೀ ಯು.ಟಿ. ಖಾದರ್ ಅವರು ಮುಖ್ಯ ಅತಿಥಿಗಳಾಗಿ […]

HOME

2026ನೇ ಸಾಲಿನ ‘ಸಂದೇಶ ಪ್ರಶಸ್ತಿ’: ಸಾಹಿತಿ ಡಾ.ನಾ.ಮೊಗಸಾಲೆ ಸೇರಿ 7 ಮಂದಿಗೆ ಗೌರವ

ಮಂಗಳೂರು: ಸಾಹಿತಿ ಡಾ.ನಾ.ಮೊಗಸಾಲೆ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಏಳು ಸಾಧಕರು ಹಾಗೂ ಒಂದು ಸಂಸ್ಥೆಗೆ 2026ನೇ ಸಾಲಿನ ‘ಸಂದೇಶ ಪ್ರಶಸ್ತಿ’ ಘೋಷಿಸಲಾಗಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಯ್ಕೆಸಮಿತಿ ಸದಸ್ಯೆ ಕನ್ಸೆಪ್ಟಾ ಫರ್ನಾಂಡಿಸ್, ‘ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ನೀಡುವ ಪ್ರಶಸ್ತಿ ತಲಾ ₹25 ಸಾವಿರ ನಗದು ಒಳಗೊಂಡಿದೆ’ ಎಂದರು. ಪ್ರಶಸ್ತಿ ಪುರಸ್ಕೃತರು: ಡಾ.ನಾ.ಮೊಗಸಾಲೆ (ಕನ್ನಡ ಸಾಹಿತ್ಯ) ಪ್ಯಾಟ್ರಿಕ್ ಕಾಮಿಲ್‌ ಮೋರಸ್ (ಕೊಂಕಣಿ ಸಾಹಿತ್ಯ), ಇಂದಿರಾ ಹೆಗ್ಗಡೆ (ತುಳು ಸಾಹಿತ್ಯ) […]

COMMUNITY NEWS DAKSHINA KANNADA HOME LATEST NEWS

ಮಂಗಳೂರು: ನಾಳೆ ಕವಿತಾ ಟ್ರಸ್ಟ್‌ನ ಇಪ್ಪತ್ತನೇ ಕವಿತಾ ಫೆಸ್ತ್ ಸಂಭ್ರಮ

ಮಂಗಳೂರು: ಕೊಂಕಣಿ ಕಾವ್ಯದ ಸ್ಥಾನಮಾನವನ್ನು ಗಣನೀಯವಾಗಿ ಹೆಚ್ಚಿಸಿರುವ ಕವಿತಾ ಟ್ರಸ್ಟ್, ಈ ವರ್ಷ ತನ್ನ ಇಪ್ಪತ್ತನೇ ಕವಿತಾ ಫೆಸ್ತ್ ಹಬ್ಬವನ್ನು ಆಚರಿಸುತ್ತಿದೆ. ಈ ಉತ್ಸವವು ಜ. 11 ರಂದು ಬೆಳಿಗ್ಗೆ 9:30 ರಿಂದ ಸಂಜೆ 4:30 ರವರೆಗೆ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ನಲ್ಲಿರುವ ಮದರ್ ತೆರೇಸಾ ಪೀಸ್ ಪಾರ್ಕ್‌ನಲ್ಲಿ ನಡೆಯಲಿದೆ. ಕೊಂಕಣಿ ಭಾಷೆಯ ಬಗ್ಗೆ ಉತ್ಸಾಹ ಹೊಂದಿರುವ ಯಾರಾದರೂ ಈ ಉತ್ಸವದಲ್ಲಿ ಭಾಗವಹಿಸಬಹುದು. ಬೆಳಿಗ್ಗೆ, ಮೆರವಣಿಗೆಯು ಟಾಗೋರ್ ಪಾರ್ಕ್‌ನಿಂದ ಪ್ರಾರಂಭವಾಗಿ ಮದರ್ ತೆರೇಸಾ ಪೀಸ್ ಪಾರ್ಕ್‌ಗೆ ಮುಂದುವರಿಯುತ್ತದೆ. […]

DAKSHINA KANNADA HOME LATEST NEWS

ಬಾಲ ಯೇಸುವಿನ ನೊವೇನಾದ ನಾಲ್ಕನೇ ದಿನ: ಆಧ್ಯಾತ್ಮಿಕ ಚಿಂತನೆ, ಕಲೆ ಮತ್ತು ಸಮುದಾಯದ ಸಹಭಾಗಿತ್ವದ ಸಂಗಮ

ಮಂಗಳೂರು: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವದ ಸಿದ್ಧತೆಯ ನೊವೇನಾದ ನಾಲ್ಕನೇ ದಿನವನ್ನು ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಈ ದಿನದ ಮುಖ್ಯ ಚಿಂತನೆಯ ವಿಷಯ “ನಿಮ್ಮ ಕರೆಯನ್ನು ದೃಢಪಡಿಸಿಕೊಳ್ಳಲು ಸಕಲ ಪ್ರಯತ್ನ ಮಾಡಿ” ಎಂಬುದಾಗಿತ್ತು. ಸಂತ ಶಿಲುಬೆಯ ಯೋವಾನರ ಆಧ್ಯಾತ್ಮಿಕ ಬರಹಗಳ ಬೆಳಕಿನಲ್ಲಿ, ಕ್ರೈಸ್ತ ಕರೆಯ ಬಗ್ಗೆ ನಿಷ್ಠೆ, ಶಿಸ್ತು ಮತ್ತು ಬದ್ಧತೆಯನ್ನು ಉಳಿಸಿಕೊಳ್ಳುವ ಕುರಿತು ಈ ದಿನದಂದು ವಿಶೇಷ ಪ್ರಬೋಧನೆ ನೀಡಲಾಯಿತು. ಸಂತ ಶಿಲುಬೆಯ ಯೋವಾನರ ಪುಣ್ಯಪಟ್ಟದ 300ನೇ ವರ್ಷಾಚರಣೆ ಮತ್ತು […]

DAKSHINA KANNADA HOME LATEST NEWS

“ಕಕ್ಕೆಪದವುಗು ಪೋಪಿನ ಸಾದಿ ಓವು” ಎಂದು ಕೇಳಿ ಬಂಟ್ವಾಳದಲ್ಲಿ ವೃದ್ಧೆಯ ಕರಿಮಣಿ ಕಳ್ಳತನ

ಬಂಟ್ವಾಳ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಬಳಿ ದಾರಿಯ ನೆಪವೊಡ್ಡಿ ಚಿನ್ನದ ಕರಿಮಣಿ ಎಗರಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ವಗ್ಗ ಜಂಕ್ಷನ್ ಬಳಿ ನಡೆದಿದೆ. ಘಟನೆ ವಿವರ 55 ವರ್ಷದ ಪದ್ಮಾವತಿ ಎಂಬುವವರು ಜ.8 ರಂದು ಮಂಗಳೂರಿಗೆ ಹೋಗಿ ವಾಪಾಸು ಬರುತ್ತಾ ವಗ್ಗ ಜಂಕ್ಷನ್ ನಲ್ಲಿ ಬಸ್ಸಿನಿಂದ ಇಳಿದು ತನ್ನ ಮನೆಯಾದ ಕಂಗಿತ್ತಿಲು ಕಡೆಗೆ ಸಂಜೆ 4 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅದೇ ರಸ್ತೆಯ ವಗ್ಗ ಕಡೆಯಿಂದ […]

DAKSHINA KANNADA HOME LATEST NEWS

ಡ್ಯೂಟಿಯಲ್ಲಿದ್ದ ಮಂಗಳೂರು ಟ್ರಾಫಿಕ್‌ ಪೊಲೀಸರ ಬೈಕ್‌ ಕಳ್ಳತನ: ಅರ್ಧ ಗಂಟೆಯ ಕೈಚಳಕ

ಮಂಗಳೂರು: ಕರ್ತವ್ಯದಲ್ಲಿದ್ದ ಟ್ರಾಫಿಕ್‌ ಪೊಲೀಸರೊಬ್ಬರು ಪಾರ್ಕ್‌ ಮಾಡಿದ ಅರ್ಧಗಂಟೆಯೊಳಗೆ ಬೈಕು ಕಳವು ನಡೆಸಿದ ಬಗ್ಗೆ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ ಪುನೀತ್‌ ಬಿ.ವೈ ಎಂಬುವವರು ಮಂಗಳೂರು ನಗರದ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಜ.5 ರಂದು ಮಂಗಳೂರು ಕೆ.ಬಿ.ಕಟ್ಟೆಯಲ್ಲಿ ಸಂಚಾರ ನಿಯಂತ್ರಣ  ಕರ್ತವ್ಯಕ್ಕೆ ನೇಮಿಸಿದಂತೆ ಸಂಜೆ 5:30 ಗಂಟೆಗೆ ತನ್ನ ತಂದೆಯ ಹೆಸರಿನಲ್ಲಿರುವ KA-13-EG 3008  ನೋಂದಣಿಯ ಹೋಂಡಾ ಶೈನ್‌ […]

DAKSHINA KANNADA HOME LATEST NEWS

ವಿಟ್ಲ: ಪೆರುವಾಯಿ ದನ ಕಳ್ಳನತದ ಆರೋಪಿ ಬಂಧನ- ಉಳಿದವರಿಗಾಗಿ ಶೋಧ

ವಿಟ್ಲ: ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಹೋಗಿದ್ದ ದನ ಕಳ್ಳತನ ಮಾಡಿದ ಆರೋಪದಲ್ಲಿ ಉಳ್ಳಾಲದ ಓರ್ವ ಆರೋಪಿಯನ್ನು ತಿಂಗಳ ಬಳಿಕ ವಿಟ್ಲ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಝುಲ್ಫಾನ್ ಮಾಲಿಕ್ (30) ಬಂಧಿತ ಆರೋಪಿ. ಘಟನೆ ವಿವರ 18-11-2025 ರಂದು ಬಂಟ್ವಾಳ ತಾಲೂಕು ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸೊಸೈಟಿ ಆವರಣದಲ್ಲಿ ಗಣೇಶ ರೈ ಹಾಗೂ ನಾರಾಯಣ ನಾಯ್ಕ ಅವರ 4 ದನಗಳು ಮೇಯುತ್ತಿದ್ದವು. ರಾತ್ರಿ ವೇಳೆ ಅಲ್ಲಿಯೇ ಮಲಗಿದ್ದ […]

DAKSHINA KANNADA HOME LATEST NEWS

ಮಂಗಳೂರು: ಬಾಲ ಯೇಸುವಿನ ವಾರ್ಷಿಕ ಮಹೋತ್ಸವ- ಹೊರೆ ಕಾಣಿಕೆ ಮೆರವಣಿಗೆ

ಮಂಗಳೂರು: ಬಾಲ ಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆಯಾಗಿ ಜ 3 ರಂದು , ಕೊರ್ಡೆಲ್ ಚರ್ಚ್ ನಿಂದ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದ ವರೆಗೆ ಭಕ್ತಿಭಾವಪೂರ್ಣ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಅನೇಕ ಭಕ್ತರು ಕೃತಜ್ಞತೆ, ನಂಬಿಕೆ ಮತ್ತು ಆಶಯದೊಂದಿಗೆ ಕಾಣಿಕೆಗಳನ್ನು ಸಮರ್ಪಿಸಿದರು. ವಂ. ವಿಜಯ್ ಮೊಂತೆರೋ, (ಸಹಾಯಕ ಧರ್ಮಗುರು , ಕೊರ್ಡೆಲ್ ಚರ್ಚ್) ಆಶೀರ್ವಾದ ನೀಡಿ, ಶ್ರೀಮತಿ ರೂತ್ ಕ್ಯಾಸ್ಟೆಲಿನೊ, (ಉಪಾಧ್ಯಕ್ಷೆ, ಕೊರ್ಡೆಲ್ ಚರ್ಚ್) ಮೆರವಣಿಗೆಗೆ ಧ್ವಜ ಹಾರಿಸಿ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಸಾಮಾಜಿಕ […]