Tag: ವೇದವ್ಯಾಸ ಕಾಮತ್ ಶ್ಲಾಘನೆ

LATEST NEWS

ಮಾನವೀಯತೆಗೆ ಧರ್ಮದ ಎಲ್ಲೆ ಇಲ್ಲ: ಬಿರುವೆರ್ ಕುಡ್ಲ ಸಂಘಟನೆಯ ಸೇವೆಗೆ ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಶ್ಲಾಘನೆ

ಮಂಗಳೂರು:ಮಾನವೀಯ ಸೇವೆಯ ಮೂಲಕ ಸಮಾಜದಲ್ಲಿ ಸಹಸ್ರಾರು ಅಸಹಾಯಕ ಕುಟುಂಬಗಳಿಗೆ ಆಸರೆಯಾಗಿರುವ ಪ್ರಮುಖ ಸಾಮಾಜಿಕ ಸಂಘಟನೆ ‘ಬಿರುವೆರ್ ಕುಡ್ಲ’ ನೇತೃತ್ವದಲ್ಲಿ, ಅದರ ದುಬಾಯಿ ಘಟಕದ ವಿಶೇಷ ಸಹಯೋಗದೊಂದಿಗೆ ಮಂಗಳೂರಿನ ಇಬ್ಬರು ನೊಂದ ಸಂತ್ರಸ್ತರಿಗೆ ಒಟ್ಟು ₹1,65,000 ಆರ್ಥಿಕ ನೆರವನ್ನು ವಿತರಿಸಲಾಯಿತು. ನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ₹55,000 ಹಾಗೂ ಗಂಭೀರ ಕಾಯಿಲೆಯಿಂದ ಹೋರಾಡುತ್ತಿರುವ ದುರ್ಗಾಪ್ರಸಾದ್ ಅವರ ವೈದ್ಯಕೀಯ ಚಿಕಿತ್ಸೆಗಾಗಿ ₹1,10,000 ಸಹಾಯ ಧನದ ಚೆಕ್‌ಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ […]