Tag: ಕೆನರಾಟಿವಿ

COMMUNITY NEWS DAKSHINA KANNADA HOME LATEST NEWS

ಮಂಗಳೂರು ಬಿಷಪ್ ಈಸ್ಟರ್ ಸಂದೇಶ: ಶಾಂತಿ ಮತ್ತು ಸಂಧಾನಕ್ಕೆ ಕರೆ

ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು 2026ರ ಈಸ್ಟರ್ ಹಬ್ಬದ ಸಂದರ್ಭದಲ್ಲಿ ನಾಡಿನ ಜನತೆಗೆ ಹಾಗೂ ಕ್ರೈಸ್ತ ಬಾಂಧವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಯೇಸು ಕ್ರಿಸ್ತರ ಪುನರುತ್ಥಾನವು ಕೇವಲ ಒಂದು ಐತಿಹಾಸಿಕ ಘಟನೆಯಲ್ಲ ಅದು ಜಗತ್ತಿಗೆ ಭರವಸೆ ಮತ್ತು ಶಾಂತಿಯ ಸಂಕೇತವಾಗಿದೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಜಗತ್ತಿನಾದ್ಯಂತ ಸಂಘರ್ಷ ಮತ್ತು ಹಿಂಸಾಚಾರಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಷಪ್ ಅವರು, ಇಂದಿನ ಅಶಾಂತಿಯ ವಾತಾವರಣಕ್ಕೆ ಕ್ರಿಸ್ತರ ಪುನರುತ್ಥಾನದ […]

LATEST NEWS

ಅಲ್ಲಿಪಾದೆ ಚರ್ಚ್‌ನಲ್ಲಿ ಭಕ್ತಿಪೂರ್ವಕ ‘ಶುಭ ಶುಕ್ರವಾರ’ ಆಚರಣೆ

ಬಂಟ್ವಾಳ: ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ನಲ್ಲಿ ‘ಶುಭ ಶುಕ್ರವಾರ’ವನ್ನು (Good Friday) ಅತ್ಯಂತ ಭಕ್ತಿ ಮತ್ತು ಶ್ರದ್ಧಾ ಪೂರಕವಾಗಿ ಆಚರಿಸಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೇಸು ಕ್ರಿಸ್ತರ ಕಷ್ಟಾನುಭವ ಹಾಗೂ ಶಿಲುಬೆ ಮರಣವನ್ನು ಸ್ಮರಿಸಿದರು.       ಧರ್ಮಕೇಂದ್ರದ ಪಾಲನಾ ಗುರುಗಳಾದ ವಂದನೀಯ ಫಾದರ್ ರಾಬರ್ಟ್ ಡಿಸೋಜಾ ಅವರ ನೇತೃತ್ವದಲ್ಲಿ ಈ ಪವಿತ್ರ ವಿಧಿವಿಧಾನಗಳು ನಡೆದವು. ವಂದನೀಯ ಫಾದರ್ ಅನುಷ್ ಡಿಕುನ್ಹಾ SJ ಮತ್ತು ವಂದನೀಯ ಫಾದರ್ ಲೆಸ್ಟನ್ ಲೋಬೋ SJ ಅವರು ಪ್ರಾರ್ಥನೆ […]

COMMUNITY NEWS DAKSHINA KANNADA HOME LATEST NEWS

ಕರಾವಳಿಯಲ್ಲಿ ಕ್ರೈಸ್ತರಿಂದ ಧ್ಯಾನ, ಪ್ರಾರ್ಥನೆಯೊಂದಿಗೆ ಗುಡ್‌ ಫ್ರೈಡೇ ಆಚರಣೆ

ಮಂಗಳೂರು: ಇಂದು ಗುಡ್ ಫ್ರೈಡೇ. ಕ್ರೈಸ್ತರಿಗೆ ಅತ್ಯಂತ ಪವಿತ್ರ ದಿನ. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮತ್ತು ಮಾನವ ಪಾಪ ವಿಮೋಚನೆಗಾಗಿ ಶಿಲುಬೆಯ ಕ್ರೂರ ಮರಣವನ್ನಪ್ಪಿದ ದೇವ ಪುತ್ರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಈ ಪವಿತ್ರ ದಿನವನ್ನು ವಿಶ್ವದಾದ್ಯಂತ ಭಕ್ತಿಯಿಂದ ಆಚರಿಚಲಾಗುತ್ತಿದೆ. ಅದರಂತೆ ಕರಾವಳಿ ನಗರಿ ಮಂಗಳೂರಿನಲ್ಲೂ ಕ್ರೈಸ್ತ ಭಾಂಧವರು ಈ ಪವಿತ್ರ ಶುಕ್ರವಾರವನ್ನು ಭಕ್ತಿ ಮತ್ತು ಶೃಧ್ದೆಯಿಂದ ಆಚರಿಸಿದರು. ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ಚರ್ಚುಗಳಿಗೆ ತೆರಳಿ ವಿಶೇಷ ಪಾರ್ಥನೆಯಲ್ಲಿ […]

HOME LATEST NEWS

ಕೆಎಸ್‌ಆರ್‌ಟಿಸಿ – ಖಾಸಗಿ ಬಸ್ ನಡುವೆ ಭೀಕರ ಅಪಘಾತ: 40ಕ್ಕೂ ಹೆಚ್ಚು ಮಂದಿಗೆ ಗಾಯ

ಶಿರಸಿ: ಇಲ್ಲಿನ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯ ಕೊಳಗಿಬೀಸ್ ಬಳಿ ಶುಕ್ರವಾರ ಸಂಜೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಭಟ್ಕಳದಿಂದ ಶಿರಸಿ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಶಿರಸಿಯಿಂದ ಕುಮಟಾ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ನಡುವೆ ಈ ಅಪಘಾತ ನಡೆದಿದೆ. ಕೊಳಗಿಬೀಸ್ ಬಳಿಯ ತಿರುವಿನಲ್ಲಿ ಚಾಲಕರ ಅಜಾಗರೂಕತೆಯ ಚಾಲನೆಯಿಂದಾಗಿ ವಾಹನಗಳು ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ […]

COMMUNITY NEWS DAKSHINA KANNADA HOME LATEST NEWS

ಶಿಲುಬೆ ಸೋಲಿನ ಸಂಕೇತವಲ್ಲ, ಬದಲಾಗಿ ಭರವಸೆಯ ದಾರಿದೀಪ: ಬಿಷಪ್‌ ಗುಡ್‌ಫ್ರೈಡೆ ಸಂದೇಶ

ಮಂಗಳೂರು : ಜೆಜು ಕ್ರಿಸ್ತರ ಕಷ್ಟಾನುಭವ ಹಾಗೂ ಮರಣದ ಸ್ಮರಣೆಯ ‘ಶುಭ ಶುಕ್ರವಾರ’ದ ಪವಿತ್ರ ವಿಧಿವಿಧಾನಗಳನ್ನು ಪಂಜದ ಸಂತ ರೀಟಾ ಚರ್ಚ್‌ನಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಸಂಜೆಯ ಆರಾಧನಾ ವಿಧಿಯ ನೇತೃತ್ವ ವಹಿಸಿದ್ದರು. ​ಈ ಪವಿತ್ರ ವಿಧಿಯು ಸಾಷ್ಟಾಂಗ ನಮನ, ಜೆಜು ಕ್ರಿಸ್ತರ ಕಷ್ಟಾನುಭವದ ವಾಚನ, ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥನೆ, ಪವಿತ್ರ ಶಿಲುಬೆಯ ಆರಾಧನೆ ಹಾಗೂ ಪರಮ ಪ್ರಸಾದ ಸ್ವೀಕಾರದ ವಿಧಿಗಳನ್ನು […]

COMMUNITY NEWS HOME INETRNATIONAL

ಹಳೆಯ ಸಂಪ್ರದಾಯಕ್ಕೆ ಮರುಜೀವ ನೀಡಿದ ಪೋಪ್‌ ಲಿಯೋ

ರೋಮ್‌: ವ್ಯಾಟಿಕನ್‌ನಲ್ಲಿ ಹೊಸ ಪರ್ವವೊಂದು ಆರಂಭವಾಗಿದೆ. ಪೋಪ್ ಲಿಯೋ XIV ಅವರು ಹಳೆಯ ಸಂಪ್ರದಾಯಕ್ಕೆ ಮರುಜೀವ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಕ್ರಿಶ್ಚಿಯನ್ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಹೋಲಿ ಥರ್ಸ್ ಡೇ’ ಅಥವಾ ಪವಿತ್ರ ಗುರುವಾರದಂದು ರೋಮ್‌ನ ಸೇಂಟ್ ಜಾನ್ ಲ್ಯಾಟರ್ನ್ ಬೆಸಿಲಿಕಾದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಪೋಪ್ ಲಿಯೋ XIV ಅವರು 12 ಮಂದಿ ಪಾದ್ರಿಗಳ ಪಾದಗಳನ್ನು ತೊಳೆಯುವ ಮೂಲಕ ‘ಪಾದಕ್ಷಾಲನೆ’ ಸಂಪ್ರದಾಯವನ್ನು ಪುನರಾರಂಭಿಸಿದರು.  ಕಳೆದ ಹಲವು ವರ್ಷಗಳಿಂದ ಪೋಪ್ ಫ್ರಾನ್ಸಿಸ್ ಅವರು […]

LATEST NEWS

ಕರಾವಳಿಯ ಚರ್ಚ್‌ಗಳಲ್ಲಿ ಪಾದ ತೊಳೆದು ಪವಿತ್ರ ಗುರುವಾರ ಆಚರಣೆ

ಮಂಗಳೂರು: ನಗರದ ಮಿಲಾಗ್ರೆಸ್‌ನ ಲೇಡಿ ಆಫ್ ಮಿರಾಕಲ್ಸ್ ಚರ್ಚ್‌ನಲ್ಲಿ ಯೇಸುವಿನ ಕೊನೆಯ ಭೋಜನದ ಸ್ಮರಣೆಯನ್ನು ಆಚರಿಸಲಾಯಿತು. ವಂದನೀಯ ಧರ್ಮ ಗುರು ಉದಯ್ ಫೆರ್ನಾಂಡಿಸ್ ಬಲಿಪೂಜೆಯನ್ನು ಅರ್ಪಿಸಿದರು ವಂದನೀಯ ಧರ್ಮ ಗುರು ಅವಿತ್ ಪಾಯ್ಸ್ ಪ್ರಬೋಧನೆ ನೀಡಿ ಪವಿತ್ರ ಪ್ರಸಾದ ಸ್ಥಾಪನೆ, ಪೌರೋಹಿತ್ಯದ ಸಂಸ್ಕಾರ ಮತ್ತು ಸೇವೆಯಲ್ಲಿರಲು ಪ್ರೀತಿಯ ಆಜ್ಞೆಯೊಂದಿಗೆ ದಿನದ ಮಹತ್ವವನ್ನು ಎತ್ತಿ ತೋರಿಸಿದರು. ಮಿಲಾಗ್ರಿಸ್‌ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ ವಂದನೀಯ ಧರ್ಮ ಗುರು ಬೋನವೆಂಚೆರ್ ನಝರೆತ್ ಆಯ್ಕೆಯಾದ ಪ್ರತಿನಿಧಿಗಳ ಪಾದಗಳನ್ನು ತೊಳೆದು, ವಿಶೇಷವಾಗಿ ಮಕ್ಕಳಿಗೆ […]

COMMUNITY NEWS DAKSHINA KANNADA HOME LATEST NEWS

ಪವಿತ್ರ ಗುರುವಾರ: ಪಾದ ತೊಳೆದು ಕ್ರಿಸ್ತನ ಸಂದೇಶ ಸಾರಿದ ಮಂಗಳೂರು ಬಿಷಪ್‌

ಮಂಗಳೂರು: ಯೇಸು ಸ್ವಾಮಿಯು ತನ್ನ ಶಿಷ್ಯರ ಜೊತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೆಸ್ತ ಧರ್ಮ ಸಭೆಯ ನೆನಪನ್ನು ಸಾರುವ ಪವಿತ್ರ ಗುರುವಾರ (ಮೊಂಡಿ ಥರ್ಸ್‌ಡೆ)ಯಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಕ್ರೆಸ್ತರು ಭಕ್ತಿಭಾವದಿಂದ ಆಚರಿಸಿದರು. ನಗರ ಹೊರವಲಯದ ಮುಕ್ಕ ಪವಿತ್ರಾತ್ಮರ ಚರ್ಚ್‌ನಲ್ಲಿ ಮಹಿಳೆ ಹಾಗೂ ಪುರುಷ ಪ್ರೇಷಿತರ ಪಾದಗಳನ್ನು ತೊಳೆದು ಯೇಸು ಸ್ವಾಮಿಯ ದೀನತೆಯ ಹಾಗೂ ಪರಸ್ಪರ ಪ್ರೀತಿಯ ಸಂದೇಶ ನೀಡಿದರು. ಬಲಿಪೂಜೆಯಲ್ಲಿ ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿದ್ದ ಫಾದರ್‌ ಮುಲ್ಲರ್‌ ಸಂಸ್ಥೆಯ ಆಡಳಿತ ಮಂಡಳಿಯ ಸಹಾಯಕ […]

HOME INETRNATIONAL LATEST NEWS

ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆಯಲ್ಲಿ ಭಾರತೀಯ ಡಿಎನ್‌ಎ ಪತ್ತೆ..!

ಇಟೆಲಿ: ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆಯಲ್ಲಿ ಭಾರತೀಯ ಡಿಎನ್‌ಎ ಪತ್ತೆಯಾಗಿದೆ ಎಂದು ಇಟಲಿಯ ವಿಜ್ಞಾನಿಗಳು ಈಗ ಜಗತ್ತಿನ ಮುಂದೆ ಇಟ್ಟಿದ್ದಾರೆ. ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆ ಎನ್ನಲಾದ ‘ಶ್ರೌಡ್ ಆಫ್ ಟುರಿನ್’ ಕುರಿತು ಈಗ ಮತ್ತೊಂದು ಅತ್ಯಂತ ರೋಚಕ ಸಂಗತಿ ಹೊರಬಿದ್ದಿದೆ. ಹೌದು, ಈ ಪವಿತ್ರ ವಸ್ತ್ರಕ್ಕೂ ಮತ್ತು ಭಾರತಕ್ಕೂ ನೇರ ನಂಟಿತ್ತೇ ಎಂಬ ಪ್ರಶ್ನೆ ಕಾಡುತ್ತಿದೆ. ಕ್ರೈಸ್ತ ಧರ್ಮೀಯರು ಅತ್ಯಂತ ಪವಿತ್ರವೆಂದು ಭಾವಿಸುವ ೪.೪ ಮೀಟರ್ ಉದ್ದ ಮತ್ತು ೧.೧ ಮೀಟರ್ ಅಗಲವಿರುವ ಈ ಲಿನಿನ್ […]

DAKSHINA KANNADA HOME LATEST NEWS

ಜನಗಣತಿಗೆ ಸಹಕರಿಸಲು ಜಿಲ್ಲಾಧಿಕಾರಿ ಕರೆ

ಮಂಗಳೂರು:- ಕರ್ನಾಟಕದಲ್ಲಿ ಜನಗಣತಿಯ ಭಾಗವಾಗಿ ಮನೆಗಳ ಗಣತಿಯು ಎಪ್ರಿಲ್ 16 ರಿಂದ ಮೇ 15 ರವರೆಗೆ 30 ದಿನಗಳ ಕಾಲ ನಡೆಸಲಾಗುತ್ತದೆ. ಇದರಲ್ಲಿ “ಸ್ವಯಂ – ಎಣಿಕೆ” ಆಯ್ಕೆಯು ಎಪ್ರಿಲ್ 1 ರಿಂದ ಎಪ್ರಿಲ್ 15 ರವರೆಗೆ ಇರುತ್ತದೆ. ಮನೆ ಪಟ್ಟಿ ಮತ್ತು ಮನೆ ಗಣತಿ (ಊಐಔ) ಸಮಯದಲ್ಲಿ ವಸತಿ ಸ್ಥಿತಿ, ಲಭ್ಯವಿರುವ ಸೌಲಭ್ಯಗಳು, ಹೊಂದಿರುವ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಜನಗಣತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಆನ್ ಲೈನ್ ಪೊೀರ್ಟಲ್ https://censusindia.gov.in  ಅನ್ನು ಅನುಷ್ಠಾನಗೊಳಿಸಲಾಗಿದೆ. ಈ […]