• Home  
  • ಧಾರ್ಮಿಕ ಕವಿ-ಕಾವ್ಯ-ಗಾಯನ ಸಂಗಮ: ಸಾಹಿತ್ಯಕ್ಕೆ ಅಗಾಧ ಶಕ್ತಿಯಿದೆ – ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ
- LATEST NEWS

ಧಾರ್ಮಿಕ ಕವಿ-ಕಾವ್ಯ-ಗಾಯನ ಸಂಗಮ: ಸಾಹಿತ್ಯಕ್ಕೆ ಅಗಾಧ ಶಕ್ತಿಯಿದೆ – ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ

ಮಂಗಳೂರು: ಅತ್ತಾವರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪುಣ್ಯ ಸಂದರ್ಭದಲ್ಲಿ ‘ಅಮೃತ ಪ್ರಕಾಶ’ ಪತ್ರಿಕೆ ಮಂಗಳೂರು ಇದರ ಸಂಯೋಜನೆಯಲ್ಲಿ ‘ಧಾರ್ಮಿಕ ಕವಿ ಕಾವ್ಯ ಗಾಯನ ಸಂಗೀತ ಕವಿಗೋಷ್ಠಿ’ಯು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು. ಧಾರ್ಮಿಕ ಕವಿಗೋಷ್ಠಿ ಗೀತ ಗಾಯನ ಸಂಗೀತ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊಫೆಸರ್ ಭಾಸ್ಕರ್ ರೈ ಕುಕ್ಕುವಳ್ಳಿ ವಹಿಸಿದ್ದರು. ಬ್ರಹ್ಮ ಕಳಸದ ಈ ಸುಸಂದರ್ಭದಲ್ಲಿ ಧಾರ್ಮಿಕ ಕವನದ ಮೂಲಕ ಸಾಹಿತ್ಯ ಸೇವೆ ಮಾಡುವ ಅವಕಾಶ ಒದಗಿದೆ. ಸಾಹಿತ್ಯಕ್ಕೆ ಅಗಾಧ ಶಕ್ತಿ ಇದೆ ಎಂದರು .ಕವಿಗಳಾಗಿ ರಘು […]

Share News

ಮಂಗಳೂರು: ಅತ್ತಾವರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪುಣ್ಯ ಸಂದರ್ಭದಲ್ಲಿ ‘ಅಮೃತ ಪ್ರಕಾಶ’ ಪತ್ರಿಕೆ ಮಂಗಳೂರು ಇದರ ಸಂಯೋಜನೆಯಲ್ಲಿ ‘ಧಾರ್ಮಿಕ ಕವಿ ಕಾವ್ಯ ಗಾಯನ ಸಂಗೀತ ಕವಿಗೋಷ್ಠಿ’ಯು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.

ಧಾರ್ಮಿಕ ಕವಿಗೋಷ್ಠಿ ಗೀತ ಗಾಯನ ಸಂಗೀತ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊಫೆಸರ್ ಭಾಸ್ಕರ್ ರೈ ಕುಕ್ಕುವಳ್ಳಿ ವಹಿಸಿದ್ದರು. ಬ್ರಹ್ಮ ಕಳಸದ ಈ ಸುಸಂದರ್ಭದಲ್ಲಿ ಧಾರ್ಮಿಕ ಕವನದ ಮೂಲಕ ಸಾಹಿತ್ಯ ಸೇವೆ ಮಾಡುವ ಅವಕಾಶ ಒದಗಿದೆ. ಸಾಹಿತ್ಯಕ್ಕೆ ಅಗಾಧ ಶಕ್ತಿ ಇದೆ ಎಂದರು .ಕವಿಗಳಾಗಿ ರಘು ಇಡ್ಕಿದು ಉಮೇಶ್ ಕಾರಂತ, ಡಾ. ಶಿವಪ್ರಕಾಶ್,ಡಾ. ಮೀನಾಕ್ಷಿ ರಾಮಚಂದ್ರ ,,ಸುಧಾ ನಾಗೇಶ್ ,ಡಾ. ಮಾಲತಿ ಶೆಟ್ಟಿ ಮಾಣೂರು ತಮ್ಮ ಪ್ರಭುದ್ದ ತುಳು ಹಾಗೂ ಕನ್ನಡ ಕವನ ವಾಚಿಸಿದರು. ತೋನ್ಸ ಪುಷ್ಕಲ ಕುಮಾರ್ ಹಾಗೂ ಲಾವಣ್ಯ ಸುಧಾಕರ್ ರಾಗ ಸಯೋಜಿಸಿ ಹಾಡಿದರು . ಸತೀಶ್ ಸುರತ್ಕಲ್, ಕೌಶಿಕ್ ಮಂಜನಾಡಿ ,ವಂದನ್ ಬೇಕಲ್ ಹಿನ್ನೆಲೆ ಸಂಗೀತ ನೀಡಿದರು. ಈ ಕಾರ್ಯಕ್ರಮ ವಿ.ಯನ್ ಆರ್ ಗೋಲ್ಡ್ ಬಂಟ್ವಾಳ ಪ್ರಾಯೋಜಕರಾಗಿದ್ದಾರೆ. ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

Share News