canaratvnews

*ಗ್ರಾಮೀಣ ಭಾಗದ ಮನೆಗಳಿಗೆ ‘ಸ್ವಾಧೀನ ಪ್ರಮಾಣ ಪತ್ರ’ (OC) ವಿನಾಯಿತಿಗೆ ಸರ್ಕಾರವನ್ನು ಆಗ್ರಹಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು*

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳು ಹಾಗೂ 94ಸಿ ಹಕ್ಕುಪತ್ರದಡಿ ನಿರ್ಮಿಸಲಾದ ಮನೆಗಳಿಗೆ ಸ್ವಾಧೀನ ಪ್ರಮಾಣ ಪತ್ರ (Occupancy Certificate – OC) ಪಡೆಯುವುದರಿಂದ ವಿನಾಯಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಸದನದ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.

‘ವಿದ್ಯುತ್ ಸಂಪರ್ಕ ಪಡೆಯಲು ಒಸಿ ವಿನಾಯ್ತಿಗಾಗಿ ಪ್ರತಿಭಟನೆ’ ಎಂಬ ವರದಿಯನ್ನು ಆಧರಿಸಿ ವಿಷಯ ಪ್ರಸ್ತಾಪಿಸಿದ ಶಾಸಕರು, ಸರ್ಕಾರದ ಪ್ರಸ್ತುತ ಆದೇಶದಲ್ಲಿರುವ ಅಸ್ಪಷ್ಟತೆಯಿಂದ ಗ್ರಾಮೀಣ ಭಾಗದ ಜನರಿಗೆ ತೊಂದರೆ ಯಾಗುತ್ತಿರುವುದನ್ನು ಸರ್ಕಾರದ ಗಮನಕ್ಕೆ ತಂದರು.. ಶಾಸಕರ ಪ್ರಮುಖ ಆಗ್ರಹಗಳು:. ಆದೇಶದ ಅಸ್ಪಷ್ಟತೆ: ಸರ್ಕಾರದ ಆದೇಶ ಸಂಖ್ಯೆ (ಆರ್.ಡಿ.ಪಿ.ಆರ್. 856/ಜಿಪಿಎ/2025) ಅನ್ವಯ 1200 ಚದರ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡಲಾಗಿದೆಯಾದರೂ, ಗ್ರಾಮೀಣ ಪ್ರದೇಶದಲ್ಲಿ ಈ ಆದೇಶದಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ.
ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಶಾಸಕರು ಈ ಸಂದರ್ಭದಲ್ಲಿ ಆಗ್ರಹಿಸಿದರು.
Share News
Exit mobile version