ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳು ಹಾಗೂ 94ಸಿ ಹಕ್ಕುಪತ್ರದಡಿ ನಿರ್ಮಿಸಲಾದ ಮನೆಗಳಿಗೆ ಸ್ವಾಧೀನ ಪ್ರಮಾಣ ಪತ್ರ (Occupancy Certificate – OC) ಪಡೆಯುವುದರಿಂದ ವಿನಾಯಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಸದನದ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.

- ವಿನಾಯಿತಿಯ ವ್ಯಾಪ್ತಿ ಹೆಚ್ಚಳ: ಸ್ವಂತ ಖರ್ಚಿನಲ್ಲಿ ಹಾಗೂ ವಿವಿಧ ವಸತಿ ಯೋಜನೆಯಡಿ ನಿರ್ಮಿಸಿದ ಮನೆಗಳು, ಭೂ ಪರಿವರ್ತಿತ ಮತ್ತು ಭೂ ಪರಿವರ್ನೆಯಾಗದ ಜಮೀನಿನಲ್ಲಿ ನಿರ್ಮಿಸಲಾದ ಮನೆಗಳು ಹಾಗೂ 94ಸಿ ಹಕ್ಕುಪತ್ರದ ನಿವೇಶನಗಳಲ್ಲಿನ ಕಟ್ಟಡಗಳಿಗೆ ಒಸಿ ಕಡ್ಡಾಯದಿಂದ ಮುಕ್ತಿ ನೀಡಬೇಕು.
- ವ್ಯಾಖ್ಯಾನ ಬದಲಾವಣೆ: ಸರ್ಕಾರದ ಆದೇಶದಲ್ಲಿರುವ ‘ನಿವೇಶನ’ ಎಂಬ ವ್ಯಾಖ್ಯಾನವನ್ನು ತೆಗೆದು ಹಾಕಿ, ಗ್ರಾಮೀಣ ಭಾಗದಲ್ಲಿರುವ ‘ಕಟ್ಟಡ’ಗಳನ್ನು ಮಾತ್ರ ಪರಿಗಣಿಸಿ ಪರಿಷ್ಕೃತ ಆದೇಶ ಹೊರಡಿಸಬೇಕು.
- ವಿದ್ಯುತ್ ಸಂಪರ್ಕ: ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಮನೆಗಳಿಗೆ ಕಾಯಂ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಪಡೆಯುವ ನಿಯಮದಿಂದ ವಿನಾಯಿತಿ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

