ಮಂಗಳೂರು: ನಗರದ ಜೆಪ್ಪುವಿನಲ್ಲಿರುವ ಸೇಂಟ್ ಆಂಟನಿ ಆಶ್ರಮದ ಮ್ಯೂಸಿಯಂ ಹಾಲ್ನಲ್ಲಿ ಭಾನುವಾರ ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ದೇಶಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು.

ಕ್ರೈಸ್ತ ಸಮುದಾಯಕ್ಕೆ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ನ್ಯಾಯವಾದಿ ಕ್ಲಾರೆನ್ಸ್ ಪೈಸ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ ಶ್ಯಾಲೆಟ್ ಪಿಂಟೋ ಮತ್ತು ಬೆಳ್ತಂಗಡಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಅಲೋಶಿಯಸ್ ಲೋಬೋ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೆರ್ವಿನ್ ಜಾನ್ಸನ್ ಲೋಬೋ, ನವೀನ್ ಸಂತೋಷ್ ಪೈಸ್, ರೋಷನ್ ಡಿಸೋಜಾ, ದೀಪಕ್ ಡಿಸೋಜಾ, ಆನ್ಸಿತಾ ಒಲಿವಿಯಾ ಪಿಂಟೋ, ವಂ. ರಯಾನ್ ಟೀಶನ್ ಪಿಂಟೋ, ಜಿತಾ ಪ್ರಿಯಾ ಮೋರಸ್ ಮತ್ತು ರೇಶಲ್ ಬ್ರೆಟ್ನಿ ಫೆರ್ನಾಂಡಿಸ್ (ದೇಶ ರತ್ನ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತರು) ಅವರನ್ನು ಅವರ ಸಾಧನೆಗಳಿಗಾಗಿ ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರಿಚರ್ಡ್ ಡಿಕೋಸ್ಟಾ ಉಪಸ್ಥಿತರಿದ್ದರು. ರೇಷ್ಮಾ ಪ್ರಿಯಾ ಡಿಸೋಜಾ ಸ್ವಾಗತಿಸಿ, ರೋಷನ್ ಡಿಸೋಜಾ ವಂದಿಸಿದರು. ಡಿಯೋನಾ ಎಲ್. ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.