ಮೈಸೂರು, ಎಪ್ರಿಲ್ 18 : ಮೈಸೂರಿನ ಬೋಗಾದಿಯ ಧ್ಯಾನ ಸಾಧನದಲ್ಲಿ ಶುಕ್ರವಾರ, ಎಪ್ರಿಲ್ 17 ರಂದು ನಡೆದ 16ನೇ ಪ್ರೊವಿನ್ಶಿಯಲ್ ಚಾಪ್ಟರ್ (ಮಹಾಧಿವೇಶನ) ನಲ್ಲಿ ಡಿಸ್ಕಾಲ್ಸ್ಡ್ ಕಾರ್ಮೆಲೈಟ್ಸ್ (Discalced Carmelites) ಸಭೆಯ ಕರ್ನಾಟಕ-ಗೋವಾ ಪ್ರಾಂತ್ಯದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ವಂದನೀಯ ರೆ| ಡಾ. ಜಾನ್ ಫ್ರಾನ್ಸಿಸ್ ಸಿಕ್ವೇರಾ, ಒಸಿಡಿ, ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಂದನೀಯ ರೆ| ಸಿಲ್ವೆಸ್ಟರ್ ಡಿ’ಸೋಜಾ, ಒಸಿಡಿ ಅವರ ಉತ್ತರಾಧಿಕಾರಿಯಾಗಿ ಇವರು ಅಧಿಕಾರ ವಹಿಸಿಕೊಂಡಿದ್ದಾರೆ.

ರೋಮ್ನ ಪಾಂಟಿಫಿಕಲ್ ಯೂನಿವರ್ಸಿಟಿ ಆಫ್ ಸೇಂಟ್ ಥಾಮಸ್ ಅಕ್ವಿನಾಸ್ (ಆಂಜೆಲಿಕಮ್) ನಿಂದ ಹರ್ಮೆನ್ಯೂಟಿಕ್ಸ್ (ಪ್ರಾಚೀನ ಪಠ್ಯಗಳ ವ್ಯಾಖ್ಯಾನ) ವಿಷಯದಲ್ಲಿ ಪರಿಣತಿಯೊಂದಿಗೆ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಗೌರವಾನ್ವಿತ ವಿದ್ವಾಂಸರಾಗಿರುವ ವಂ| ಜಾನ್ ಅವರು ಹಲವಾರು ಪದವಿ ಮತ್ತು ಸ್ನಾತಕೋತ್ತರ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ವಲಯದ ಆಚೆಗೆ, ಮಾನವ ಸಂಪನ್ಮೂಲ ಅಭಿವೃದ್ಧಿಗೆ (HRD) ಅವರು ನೀಡಿದ ಕೊಡುಗೆಗಳು, ಕಾರ್ಮೆಲೈಟ್ ಆಧ್ಯಾತ್ಮಿಕತೆ ಮತ್ತು ಅತೀಂದ್ರಿಯತೆಯ (mysticism) ಬಗೆಗಿನ ಅವರ ಆಳವಾದ ಒಲವು ಮತ್ತು ತೊಡಗಿಸಿಕೊಳ್ಳುವಿಕೆಗೆ ಅವರು ಹೆಸರುವಾಸಿಯಾಗಿದ್ದಾರೆ. “ಆಂತರಿಕ ಮೌನ ಮತ್ತು ದೈವಿಕ ಅನ್ಯೋನ್ಯತೆ” (Inner Silence and Divine Intimacy) ಕುರಿತಾದ ಅವರ ಚಿಂತನೆಗಳು ಅನೇಕರಿಗೆ ಸ್ಫೂರ್ತಿ ನೀಡಿವೆ.
ಇವರು ಮಂಗಳೂರಿನ ಆಂತರಿಕ ಮೌನ ಮತ್ತು ಧ್ಯಾನ ಕೇಂದ್ರವಾದ “ಋಷಿವನ” (Ryshivana) ಹಾಗೂ ಗೋವಾದ ಕಾಣಕೋಣದ ಕ್ಸೆಲ್ಲಿಮ್ನಲ್ಲಿ ಯುವಜನರು ಮತ್ತು ಕುಟುಂಬಗಳಿಗಾಗಿರುವ ಪ್ರಾರ್ಥನಾ ಕೇಂದ್ರ “ಡಿವೈನ್ ಸ್ಪ್ರಿಂಗ್ಸ್” (Divine Springs) ಎಂಬೆರಡು ಧ್ಯಾನ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವಂ| ಜಾನ್ ಅವರು ಪ್ರಸಿದ್ಧ ಬರಹಗಾರರು ಹಾಗೂ ಸಂಪಾದಕರೂ ಹೌದು. ಅವರು ಧರ್ಮ ಮತ್ತು ಆಧ್ಯಾತ್ಮಿಕತೆಯ ಪತ್ರಿಕೆಯಾದ “ಧ್ಯಾನ” (Dhyana) ದ ಸಂಸ್ಥಾಪಕ ಮತ್ತು ಮುಖ್ಯ ಸಂಪಾದಕರಾಗಿದ್ದರು, ಜೊತೆಗೆ ಕನ್ನಡದ ಆಧ್ಯಾತ್ಮಿಕ ಪತ್ರಿಕೆಯಾದ “ಜೀವ ಜಲ” ದ ಸಂಸ್ಥಾಪಕ-ಸಂಪಾದಕರಾಗಿದ್ದರು. ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಪ್ರತಿಷ್ಠಿತ ನಿಯತಕಾಲಿಕಗಳಿಗೆ ಅವರು ವ್ಯಾಪಕವಾಗಿ ಲೇಖನಗಳನ್ನು ನೀಡಿದ್ದಾರೆ.
ಅವರ ಪ್ರಮುಖ ಪ್ರಕಟಣೆಗಳಲ್ಲಿ ‘ಡಿಸಿಪ್ಲಿನ್ ಆಫ್ ಡೈಲಾಗ್’ (2001), ‘ಟ್ರಾನ್ಸ್ಫಾರ್ಮಿಂಗ್ ಫಾರ್ಮೇಶನ್’ (2002), ‘ಕಾಂಬ್ಯಾಟಿಂಗ್ ಟೆರರಿಸಂ’ (2004), ‘ತಾಚೆ ಮೋಗಾಳ್ ವೆಂಗೆಂತ್’ (2024), ‘ಇನ್ ಹಿಸ್ ಅಬೈಡಿಂಗ್ ಲವ್: ಸಿಂಪಲ್ ಸ್ಟೆಪ್ಸ್ ಟು ಕಾಂಟೆಂಪ್ಲೇಟಿವ್ ಪ್ರೇಯರ್’ (2024), ‘ಕ್ಲೈಂಬಿಂಗ್ ದಿ ಮೌಂಟೇನ್ ಆಫ್ ದಿ ಲಾರ್ಡ್: ಎ ಥರ್ಟಿ-ಡೇ ರಿಟ್ರೀಟ್ ಆನ್ ಕಾಂಟೆಂಪ್ಲೇಟಿವ್ ಕಾರ್ಮೆಲೈಟ್ ಸ್ಪಿರಿಚುಯಾಲಿಟಿ’ (2025), ಹಾಗೂ ‘ಬಿಯಾಂಡ್ ದಿ ಹೊರೈಸನ್ಸ್ ಆಫ್ ಲವ್: ಸೇಂಟ್ ತೆರೇಸಾ ಫಾರ್ ಅವರ್ ಟೈಮ್ಸ್’ (2026) ಸೇರಿವೆ.
ವಂ| ಜಾನ್ ಅವರು ತತ್ವಶಾಸ್ತ್ರ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಅತೀಂದ್ರಿಯತೆಯ (mysticism) ಕ್ಷೇತ್ರಗಳಲ್ಲಿ ತಮ್ಮ ಸಂಶೋಧನೆ ಹಾಗೂ ಬರವಣಿಗೆಯನ್ನು ಸಕ್ರಿಯವಾಗಿ ಮುಂದುವರಿಸಿದ್ದಾರೆ.