• Home  
  • *ಮಂಗಳೂರು ಧರ್ಮಕ್ಷೇತ್ರದ ಬಿಷಪ್ ರಿಂದ ಸಂತ ಅಂತೋನಿ ಆಶ್ರಮದಲ್ಲಿ ವಿನೂತನ ‘ಡಿಜಿಟಲ್ ಗೋದಲಿ’ ಲೋಕಾರ್ಪಣೆ*
- COMMUNITY NEWS - DAKSHINA KANNADA - HOME

*ಮಂಗಳೂರು ಧರ್ಮಕ್ಷೇತ್ರದ ಬಿಷಪ್ ರಿಂದ ಸಂತ ಅಂತೋನಿ ಆಶ್ರಮದಲ್ಲಿ ವಿನೂತನ ‘ಡಿಜಿಟಲ್ ಗೋದಲಿ’ ಲೋಕಾರ್ಪಣೆ*

ಮಂಗಳೂರು ಧರ್ಮಕ್ಷೇತ್ರದ ಬಿಷಪ್ ರಿಂದ ಸಂತ ಅಂತೋನಿ ಆಶ್ರಮದಲ್ಲಿ ವಿನೂತನ ‘ಡಿಜಿಟಲ್ ಗೋದಲಿ’ ಲೋಕಾರ್ಪಣೆ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟ‌ರ್ ಪಾವ್ಕ್ ಸಲ್ದಾನ್ಹಾ ಅವರು ಜೆಪ್ಪುವಿನ ಸಂತ ಅಂತೋನಿ ಆಶ್ರಮದ ನಿವಾಸಿಗಳೊಂದಿಗೆ ಕ್ರಿಸ್‌ಮಸ್‌ ಸಂಭ್ರಮವನ್ನು ಆಚರಿಸಿದರು. ಸಾಂಪ್ರದಾಯಿಕ ಭಕ್ತಿ ಮತ್ತು ಆಧುನಿಕ ತಂತ್ರಜ್ಞಾನವನ್ನು ಸಮ್ಮಿಳಿತಗೊಳಿಸಿದ ವಿಶಿಷ್ಟ ‘ಡಿಜಿಟಲ್ ಕ್ರಿಬ್’ (ಗೋದಲಿ) ಉದ್ಘಾಟನೆಯು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಆಶ್ರಮದ ಪ್ರವೇಶ ದ್ವಾರದಲ್ಲಿ ಬಿಷಪ್ ಅವರು ಭವ್ಯವಾದ ಕ್ರಿಸ್‌ಮಸ್‌ ಗೋದಲಿಯನ್ನು ಆಶೀರ್ವದಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. […]

Share News

ಮಂಗಳೂರು ಧರ್ಮಕ್ಷೇತ್ರದ ಬಿಷಪ್ ರಿಂದ ಸಂತ ಅಂತೋನಿ ಆಶ್ರಮದಲ್ಲಿ ವಿನೂತನ ‘ಡಿಜಿಟಲ್ ಗೋದಲಿ’ ಲೋಕಾರ್ಪಣೆ

ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟ‌ರ್ ಪಾವ್ಕ್ ಸಲ್ದಾನ್ಹಾ ಅವರು ಜೆಪ್ಪುವಿನ ಸಂತ ಅಂತೋನಿ ಆಶ್ರಮದ ನಿವಾಸಿಗಳೊಂದಿಗೆ ಕ್ರಿಸ್‌ಮಸ್‌ ಸಂಭ್ರಮವನ್ನು ಆಚರಿಸಿದರು.

ಸಾಂಪ್ರದಾಯಿಕ ಭಕ್ತಿ ಮತ್ತು ಆಧುನಿಕ ತಂತ್ರಜ್ಞಾನವನ್ನು ಸಮ್ಮಿಳಿತಗೊಳಿಸಿದ ವಿಶಿಷ್ಟ ‘ಡಿಜಿಟಲ್ ಕ್ರಿಬ್’ (ಗೋದಲಿ) ಉದ್ಘಾಟನೆಯು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಆಶ್ರಮದ ಪ್ರವೇಶ ದ್ವಾರದಲ್ಲಿ ಬಿಷಪ್ ಅವರು ಭವ್ಯವಾದ ಕ್ರಿಸ್‌ಮಸ್‌ ಗೋದಲಿಯನ್ನು ಆಶೀರ್ವದಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಈ ವರ್ಷದ ವಿಶೇಷ ಆಕರ್ಷಣೆಯಾದ ಸಂವಾದಾತ್ಮಕ ಡಿಜಿಟಲ್ ಅನುಭವದ ಮೂಲಕ, ಸಂದರ್ಶಕರು ಕ್ಯೂ.ಆ‌ರ್ (QR) ಕೋಡ್ ಸ್ಕ್ಯಾನ್ ಮಾಡುವ ಮೂಲಕ ವರ್ಚುವಲ್ ಜಗತ್ತಿನಲ್ಲಿ ಯೇಸುವಿನ ಜನನದ ದೃಶ್ಯಗಳನ್ನು ವೀಕ್ಷಿಸಬಹುದು, ರಸಪ್ರಶ್ನೆಗಳಲ್ಲಿ ಭಾಗವಹಿಸಬಹುದು ಮತ್ತು ಜಾಗತಿಕ ಗೋದಲಿ ಸಂಪ್ರದಾಯಗಳ ಇತಿಹಾಸವನ್ನು ತಿಳಿದುಕೊಳ್ಳಬಹುದಾಗಿದೆ.

ತಮ್ಮ ಕ್ರಿಸ್‌ಮಸ್‌ ಸಂದೇಶದಲ್ಲಿ ಬಿಷಪ್ ಪೀಟ‌ರ್ ಪಾವ್ ಸಲ್ದಾನ್ಹಾ ಅವರು ಕ್ರಿಸ್ಮಸ್ ಕುರಿತ ಗಾಢ ಚಿಂತನೆಗೆ ಕರೆ ನೀಡಿದರು. “ದೇವರಿಗೆ ಮಹಿಮೆ ಸಲ್ಲಿಕೆಯಾಗುವುದು ಮತ್ತು ಜನರಿಗೆ ಶಾಂತಿ ಸಿಗುವುದು ಯಾವಾಗ? ಎಂಬ ಪ್ರಮುಖ ಪ್ರಶ್ನೆಯನ್ನು ಇಂದು ನಾವು ವಿವೇಚಿಸಬೇಕಾಗಿದೆ. ನಾವು ಇತರರ ಬಗ್ಗೆ ಕಾಳಜಿ ವಹಿಸಿದಾಗ, ಹಂಚಿಕೊಂಡಾಗ ಮತ್ತು ಕ್ಷಮಿಸಿದಾಗ ದೇವರಿಗೆ ಮಹಿಮೆ ಸಲ್ಲುತ್ತದೆ. ಸಂತ ಅಂತೋನಿ ಆಶ್ರಮವು ದೇವರಿಗೆ ಮಹಿಮೆ ಸಲ್ಲುವ ಮತ್ತು ಜನರು ಶಾಂತಿಯಿಂದ ಇರುವ ಪವಿತ್ರ ಸ್ಥಳವಾಗಿದೆ; ಇದು ನಿವಾಸಿಗಳಿಗೆ ಆಧ್ಯಾತ್ಮಿಕ ಮತ್ತು ಮಾನವೀಯ ಅಗತ್ಯಗಳೊಂದಿಗೆ ಜೀವನದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಆಶ್ರಯ ತಾಣವಾಗಿದೆ,” ಎಂದು ಬಿಷಪ್ ತಿಳಿಸಿದರು.

ಕ್ರೈಸ್ತ ಜೀವನದ ಸಾರವನ್ನು ಒತ್ತಿಹೇಳಿದ ಬಿಷಪ್, “ನಾವು ಸೌಹಾರ್ದತೆಯಿಂದ ಬದುಕಿದಾಗ ಮತ್ತು ಪರಸ್ಪರ ಪ್ರೀತಿಸಿದಾಗ ಮಾತ್ರ ನಮಗೆ ಶಾಂತಿ ಸಿಗುತ್ತದೆ. ಎಲ್ಲಾ ದ್ವೇಷ ಮತ್ತು ವಿನಾಶಕ್ಕೆ ಯೇಸುವೇ ಅಂತಿಮ ಉತ್ತರ. ಈ ಆಶ್ರಮವನ್ನು ಸುಲಲಿತವಾಗಿ ನಿರ್ವಹಿಸುತ್ತಿರುವ ನಿರ್ದೇಶಕರು ಮತ್ತು ಎಲ್ಲಾ ಧರ್ಮಗುರುಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ,” ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಮಾಜಿ ಸದಸ್ಯ ಹಾಗೂ ಕೆಪಿಸಿಸಿ (KPCC) ಪ್ರಸ್ತುತ ಸದಸ್ಯ ಪಿಯುಸ್ ಎಲ್. ರೊಡ್ರಿಗಸ್ ಮಾತನಾಡಿ, “ಸಂತ ಅಂತೋನಿ ಆಶ್ರಮವು ಜೀವನದಲ್ಲಿ ಭರವಸೆ ಕಳೆದುಕೊಂಡವರಿಗೆ ಭರವಸೆಯ ಬೆಳಕಾಗಿದೆ. ಪ್ರೀತಿ ಮತ್ತು ಭರವಸೆಯ ಈ ಹಬ್ಬವನ್ನು ಆಚರಿಸಲು ಇಲ್ಲಿಗೆ ಬಂದಿರುವುದು ನನಗೆ ಸಂತೋಷ ತಂದಿದೆ,” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ಆಶ್ರಮದ ನಿವಾಸಿಗಳಿಗೆ ಕುಸ್ವಾ‌ರ್ ಮತ್ತು ಉಡುಗೊರೆಗಳನ್ನು ವಿತರಿಸುವ ಮೂಲಕ ಉದಾರತೆ ಮೆರೆದ ಕಾರ್ಯಕ್ರಮದ ಸಂಯೋಜಕ ಸಂತೋಷ್‌ ಸಿಕ್ವೆರಾ ಅವರನ್ನು ಬಿಷಪ್ ಗೌರವಿಸಿದರು. ಬಂಟ್ವಾಳದ ‘ಟೀಮ್ ವಿಂಟರ್ ಟೋನ್’ ಮತ್ತು ಆಗ್ರಾ‌ರ್ ತಂಡದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಂತ ಅಂತೋನಿ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ ಅತಿಥಿಗಳನ್ನು ಸ್ವಾಗತಿಸಿದರು. ಆಶ್ರಮದ ಚಾಪ್ಲಿನ್ ವಂದನೀಯ ಫಾದರ್ ಗಿಲ್ಬರ್ಟ್ ಡಿಸೋಜ, ಸಹಾಯಕ ನಿರ್ದೇಶಕರಾದ ವಂದನೀಯ ಫಾದರ್ ನೆಲ್ಸನ್ ಒಲಿವೆರಾ ಮತ್ತು ವಂದನೀಯ ಫಾದ‌ರ್ ವಿವಿಯನ್ ರೊಡ್ರಿಗಸ್‌ ಉಪಸ್ಥಿತರಿದ್ದರು. ವಂದನೀಯ ಫಾದ‌ರ್ ಪ್ರವೀಣ್ ಅಮೃತ್ ಮಾರ್ಟಿಸ್ ವಂದಿಸಿದರು. ಕಾರ್ಯಕ್ರಮವು ಪ್ರೀತಿ ಭೋಜನದೊಂದಿಗೆ ಮುಕ್ತಾಯವಾಯಿತು.

Share News