canaratvnews

ಶಬರಿಮಲೆ ಯಾತ್ರೆ ವೇಳೆ ಉಪ್ಪಿನಂಗಡಿ ಬಜರಂಗದಳ ಮುಖಂಡ ಹೃದಯಾಘಾತದಿಂದ ಸಾವು

ಉಪ್ಪಿನಂಗಡಿ: ವಿಶ್ವ ಹಿಂದೂ ಪರಿಷತ್ ಬಜರಂಗದಳದ ಉಪ್ಪಿನಂಗಡಿ ಪ್ರಖಂಡ ಸುರಕ್ಷಾ ಪ್ರಮುಖ್ ಆಗಿದ್ದ ಬೆಳ್ತಂಗಡಿ ತಾಲ್ಲೂಕು ತೆಕ್ಕಾರು ಗ್ರಾಮದ ನಿವಾಸಿ ಸುಧೀರ್ ತೆಕ್ಕಾರ್ (26) ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಭಾನುವಾರ ರಾತ್ರಿ ಶಬರಿಮಲೆಯಲ್ಲಿ ಹೃದಯಾಘಾತ ಸಂಭವಿಸಿದ್ದು, ಮೃತದೇಹವನ್ನು ಮಂಗಳವಾರ ತೆಕ್ಕಾರು ಮನೆಗೆ ತಂದು ಮೆರವಣಿಗೆಯಲ್ಲಿ ಉಪ್ಪಿನಂಗಡಿಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಈ ಬಾರಿ ಶಬರಿಮಲೆ ಯಾತ್ರೆ ಸಂದರ್ಭ ಹಲವರಿಗೆ ಹೃದಯಾಘಾತ ಆಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ತನಿಖಾ ತಂಡಗಳು ನಿಗಾ ವಹಿಸಬೇಕಿದೆ ಎಂದು ವಿಶ್ವಹಿಂದೂ ಪರಿಷತ್ ಬಜರಂಗ ದಳದ ಜಿಲ್ಲಾ ಗೋ ರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು ಆಗ್ರಹಿಸಿದರು.

Share News
Exit mobile version