canaratvnews

ಪುತ್ತೂರು: ಧೂಳಿನ ಸಮಸ್ಯೆ- ಶಾಸಕರ ಜತೆ ವಾಗ್ವಾದ ನಡೆಸಿದ್ದ ಪ್ರಾಂಶುಪಾಲೆ ಅಮಾನತು

ಪುತ್ತೂರು, ಫೆ. 27 : ಕಾಲೇಜು ಪಕ್ಕದ ಆರೋಗ್ಯ ಇಲಾಖೆಯ ಕಟ್ಟಡದ ಕಾಮಗಾರಿಯಿಂದ ಬರುತ್ತಿದ್ದ ಧೂಳಿನ ವಿರುದ್ಧ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ಪ್ರಾಂಶುಪಾಲೆಯನ್ನೇ ಶಾಸಕರ ಶಿಫಾರಸಿನ ಮೇಲೆ ಉನ್ನತ ಶಿಕ್ಷಣ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವೇದಶ್ರೀನಿಡ್ಯಾ ಅಮಾನತು ಆದವರು. ಗುರುವಾರ ಸಂಜೆ ಅಮಾನತು ಪತ್ರ ಬಹಿರಂಗಗೊಂಡಿದೆ.
ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಯಾಗಿರುವ ವೇದಶ್ರೀ ನಿಡ್ಯಾ ನೂತನ ಕಟ್ಟಡಕ್ಕಾಗಿ ಶಾಸಕರಿಗೆ ಮನವಿ ನೀಡಿದ್ದು, ತರಗತಿಗೆ ಬಂದ ಸಂದರ್ಭಉಸಿರುಗಟ್ಟಿಸುವ ವಾತಾವರಣ ಇದ್ದ

ಆದರೆ ಫೆ. 16ರಂದು ಬೆಳಗ್ಗೆ ವಿದ್ಯಾರ್ಥಿಗಳು ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ರಸ್ತೆ ತಡೆ ನಡೆಸಿದ್ದು ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಪ್ರತಿಭಟನೆ ಸಂದರ್ಭ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ಮತ್ತು ಪ್ರಾಧ್ಯಾಪಕ ಉಪಸ್ಥಿತರಿದ್ದು ಇದಕ್ಕೆ ಪ್ರೇರೇಪಿಸಿರುವ ಬಗ್ಗೆ ನಗರ ಠಾಣಾ ಇಲಾಖೆಗೆ ಗುಪ್ತ ಮಾಹಿತಿ ಬಂದಿತ್ತು ಎನ್ನಲಾಗಿದೆ.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ನೀಡಿದ ಪತ್ರದಲ್ಲಿ ಅಶೋಕ್ ಪ್ರಾಂಶುಪಾಲೆಯು ವಿದ್ಯಾರ್ಥಿಗಳು ಡಯಾಲಿಸಿಸ್ ಕೇಂದ್ರದ ನಿರ್ಮಾಣ ಕಾಮಗಾರಿಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಆರೋಗ್ಯದ ಸಮಸ್ಯೆ ಕುರಿತು ತಮಗೆ ತಿಳಿಸಿಲ್ಲ. ತಪ್ಪು ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಸರಕಾರದ ವಿರುದ್ಧ ಪ್ರತಿಭಟನೆ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಿದ್ದರು. ಈ ಹಿನ್ನೆಲೆ ಯಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಪ್ರಕರಣದಲ್ಲಿ ಇಲಾಖಾ ವಿಚಾರಣೆ ಯನ್ನು ಕಾಯ್ದಿರಿಸಿ ಅಮಾನತು ಗೊಳಿಸಲಾಗಿದೆ. ನಡೆಸುವಂತೆ ಪ್ರಾಂಶುಪಾಲರ ಮಾಡಿದ್ದು, ಆಡಳಿತಾತ್ಮಕ ಜವಾಬ್ದಾರಿ

ಪರ- ವಿರೋಧ ಅಭಿಪ್ರಾಯ
ನ್ಯಾಯಕೋಸ್ಕರ ನಡೆಸಿದ ವಿದ್ಯಾರ್ಥಿನಿಯರ ಪ್ರತಿಭಟನೆಯನ್ನು ರಾಜಕೀಯ ದುರುದ್ದೇಶದಿಂದ ಪರಿಗಣಿಸಿ ಪ್ರಾಂಶುಪಾಲರ ವಿರುದ್ದ ಅಮಾನತು ಶಿಕ್ಷೆ ವಿಧಿಸಿರುವುದು ಸರಿ ಅಲ್ಲ ಎಂದು ಕೆಲವರು ಅಭಿ ಪ್ರಾಯಪಟ್ಟರೆ, ಕೆಲವರು ಶಾಸಕರ ನಡೆ ಸರಿ ಇದೆ ಎಂದು ಸಮರ್ಥಿಸಿB

Share News
Exit mobile version