ಮಂಜೇಶ್ವರ: ವರ್ಕಾಡಿಯಲ್ಲಿ 35ನೇ ವರ್ಷದ ವೆಲಂಕಣಿ ಮಾತೆಯ ವಾರ್ಷಿಕ ಮಹೋತ್ಸವ
ಮಂಜೇಶ್ವರ: ಮಂಜೇಶ್ವರದ ವರ್ಕಾಡಿಯ ಯೇಸುಕ್ರಿಸ್ತರ ತಿರು ಹೃದಯದ ದೇವಾಲಯದಲ್ಲಿ ನಡೆದ ವೆಲಂಕಣಿ ಮಾತೆಯ 35ನೇ ವಾರ್ಷಿಕ ಮಹೋತ್ಸವ ಸಂಭ್ರಮ ನಡೆಯಿತು. ಈ ಬಲಿಪೂಜೆಯಲ್ಲಿ ಬೆಂಗಳೂರಿನ ನಿವೃತ್ತ ಆರ್ಚ್ ಬಿಷಪ್ ಅ.ವಂ. ಡಾ. ಬರ್ನಾಡ್ ಮೊರಾಸ್ ಅವರು ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿದರು. ನಂತರ ನಡೆದ ಪ್ರಬೋಧನೆಯಲ್ಲಿ “ವೆಲಂಕಣಿ ಮಾತೆ ಯೇಸುಕ್ರಿಸ್ತರ ಮಾತೆ ಹೇಗೋ ನಮ್ಮ ಮಾತೆಯೂ ಹೌದು”. ತಮಿಳುನಾಡಿನ ವೆಲಂಕಣಿಯಲ್ಲಿ ಕ್ರಿ.ಶ 1570 ಇಸವಿಯಲ್ಲಿ ಬಾಲಕನೊಬ್ಬನಿಗೆ ಕಾಣಿಸಿಕೊಂಡು ಪವಾಡಗಳನ್ನು ಸೃಷ್ಟಿಸಿ ಪ್ರಸಿದ್ಧಿ ಹೊಂದಿದರು. ಇದರಿಂದ ಆಕೆಗೆ ವೆಲಂಕಣಿ ಮಾತೆ […]




