ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಸೌಹಾರ್ದಯುತ ಈದುಲ್ ಅಳ್ಹಾ (ಬಕ್ರೀದ್) ಆಚರಣೆ
ಮಂಗಳೂರು, ಮೇ 28: ಬಜಾಲ್ ನಂತೂರಿನ ಬದ್ರಿಯಾ ಜುಮಾ ಮಸೀದಿ ಮತ್ತು ಹಯತುಲ್ ಇಸ್ಲಾಂ ಮದರಸದ ಆಶ್ರಯದಲ್ಲಿ ಈದುಲ್ ಅಳ್ಹಾ (ಬಕ್ರೀದ್) ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸೌಹಾರ್ದತೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಖತೀಬರಾದ ಅಬ್ದುಲ್ ನಾಸಿರ್ ಸಅದಿ ಅವರು, “ಯಾರೂ ಯಾರೊಂದಿಗೂ ದ್ವೇಷ ಸಾಧಿಸದೆ, ಪರಸ್ಪರ ಕಚ್ಚಾಡದೆ ಒಗ್ಗಟ್ಟಿನಿಂದ ಬಾಳಬೇಕು. ಎಂತಹದ್ದೇ ಕಠಿಣ ಪರಿಸ್ಥಿತಿಗಳು ಎದುರಾದರೂ ಅಲ್ಲಾಹನು ನೀಡಿದ ಅನುಗ್ರಹಗಳನ್ನು ಮರೆಯದೆ ಕೃತಜ್ಞತೆ ಸಲ್ಲಿಸಬೇಕು. ಸದಾ ಕಾಲ ದೇವನಿಗೆ ತಲೆಬಾಗಿ ಇಹಪರ […]



