• Home  
  • ಸ್ನೇಹಾಲಯದಲ್ಲಿ ತಂದೆ-ತಾಯಿಯೊಂದಿಗೆ ಮಗನ ಪುನರ್ಮಿಲನ
- DAKSHINA KANNADA - HOME

ಸ್ನೇಹಾಲಯದಲ್ಲಿ ತಂದೆ-ತಾಯಿಯೊಂದಿಗೆ ಮಗನ ಪುನರ್ಮಿಲನ

ಮಂಜೇಶ್ವರ: ಗಟ್ಟಲೆಯ ಅನಿಶ್ಚಿತತೆ ಮತ್ತು ಆತಂಕದ ನಂತರ ಕೊನೆಗೂ 31 ವರ್ಷದ ಶ್ರೀ ಪಾಂಡಿರಾಜ್‌ ಅವರು ತಮ್ಮ ತಂದೆ-ತಾಯಿಯೊಂದಿಗೆ ಪುನ ಒಂದಾದರು. ಈ ಭಾವನಾತ್ಮಕ ಪುನರ್ಮಿಲನವು ಕೇರಳದ ಕಾಸರಗೋಡಿನ ಮಂಜೇಶ್ವರದ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ನಡೆಯಿತು. ತಮ್ಮ ಮಗನ ಸುರಕ್ಷಿತ ಮರಳುವಿಕೆಗಾಗಿ ಕಾಯುತ್ತಿದ್ದ ತಂದೆ-ತಾಯಿ ಆನಂದಭಾಷ್ಪಗಳೊಂದಿಗೆ ತಮ್ಮ ಮಗನನ್ನು ಅಪ್ಪಿಕೊಳ್ಳುವ ಕ್ಷಣವು ನಿಜವಾಗಿಯೂ ಮಾರ್ಮಿಕವಾಗಿತ್ತು.

ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಪಾಂಡಿರಾಜ್‌ರನ್ನು, ಸ್ವಯಂ-ಮಾತುಕತೆ ಮತ್ತು ಅಲೆದಾಡುವ ವರ್ತನೆಯೊಂದಿಗೆ, ಕಣ್ಣೂರಿನ ನೆಡುಂಪೊಯಿಲ್‌ನ ಕೃಪಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿಯಾದಂತಹ ಶ್ರೀಮತಿ ನಿರ್ಮಲಾ ಸಂತೋಷ್ ರವರು ಪಾಂಡಿರಾಜ್ ರವರನ್ನು ರಕ್ಷಿಸಿದ್ದರು. ಅನಂತರ ಫೆಬ್ರವರಿ 21, 2025 ರಂದು ಅವರನ್ನು ಸ್ನೇಹಾಲಯಕ್ಕೆ ದಾಖಲಿಸಲಾಯಿತು, ಅಲ್ಲಿ ಅವರಿಗೆ ಸಮಗ್ರ ಮಾನಸಿಕ ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿ ಬೆಂಬಲವನ್ನು ಒದಗಿಸಲಾಯಿತು.

ಸ್ನೇಹಾಲಯ ತಂಡದ ಸಮರ್ಪಿತ ಪ್ರಯತ್ನಗಳಿಂದ ಮತ್ತು ಅವರ ಕ್ರಮೇಣ ಚೇತರಿಕೆಯಿಂದ, ಪಾಂಡಿರಾಜ್‌ ಅವರು ತಮ್ಮ ವಿಳಾಸದ ವಿವರಗಳನ್ನು ನೆನಪಿಸಿಕೊಳ್ಳಲು ಶಕ್ತರಾದರು. ಇದರಿಂದಾಗಿ ಸ್ನೇಹಾಲಯದ ಸಿಬ್ಬಂದಿಗೆ ತಮಿಳುನಾಡಿನ ಕೊಯಮತ್ತೂರಿನ ರಾಮನಾಥಪುರಂನ ಅರುಣಾಸಲಂ ಕಾಲೋನಿಯಲ್ಲಿರುವ ಅವರ ಕುಟುಂಬವನ್ನು ಪತ್ತೆಹಚ್ಚಲು ಸಾಧ್ಯವಾಯಿತು.
ಜುಲೈ 22, 2025 ರಂದು, ಅವರ ತಂದೆ-ತಾಯಿ ಶ್ರೀ ಎಸ್. ಸೌಂದರಾಜ್ ಮತ್ತು ಶ್ರೀಮತಿ ಕಸ್ತೂರಿ ಅವರು ಸ್ನೇಹಾಲಯಕ್ಕೆ ಆಗಮಿಸಿ ತಮ್ಮ ಕಳೆದು ಹೋದ ಮಗನನ್ನು ಆನಂದದಿಂದ ಅಪ್ಪಿಕೊಂಡರು. ಈ ಭಾವನಾತ್ಮಕ ಕ್ಷಣವನ್ನು ಸ್ನೇಹಾಲಯದ ಸಿಬ್ಬಂದಿ ವರ್ಗವು ಸಂತೋಷದಿಂದ ವೀಕ್ಷಿಸಿತು.

ಈ ಸಮಾಗಮವು ಸ್ನೇಹಾಲಯದ ಸಕಾಲಿಕ ಹಸ್ತಕ್ಷೇಪ, ಸಮರ್ಪಿತ ಸೇವೆ, ವೃತ್ತಿಪರ ಆರೈಕೆ ಮತ್ತು ಪ್ರೀತಿಯ ಕಾಳಜಿಯಿಂದ ಮಾನಸಿಕ ಆರೋಗ್ಯ ಸಂಕಷ್ಟದಿಂದ ಬೇರ್ಪಟ್ಟ ಕುಟುಂಬಗಳನ್ನು ಒಂದುಗೂಡಿಸುವ ಜೀವಂತ ಸಾಕ್ಷಿಯಾಗಿ ಮೂಡಿಬಂತು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678