• Home  
  • ಕರ್ನಾಟಕ ಬ್ಯಾಂಕ್‌ನಿಂದ ಸ್ನೇಹಾಲಯಕ್ಕೆ ಹೃದಯಸ್ಪರ್ಶಿ ಕೊಡುಗೆ
- DAKSHINA KANNADA - HOME - LATEST NEWS

ಕರ್ನಾಟಕ ಬ್ಯಾಂಕ್‌ನಿಂದ ಸ್ನೇಹಾಲಯಕ್ಕೆ ಹೃದಯಸ್ಪರ್ಶಿ ಕೊಡುಗೆ

ಮಂಗಳೂರು: ಕರ್ನಾಟಕ ಬ್ಯಾಂಕ್ ತನ್ನ ಸಿಎಸ್ಆರ್ ಫಂಡ್ ಮೂಲಕ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಕೊಡುಗೆ ನೀಡಿದೆ.

ಜೂ.12 ರಂದು ಸ್ನೇಹಾಲಯದ ವೃದ್ಧರ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 10.57 ಲಕ್ಷ ರೂ. ಮೊತ್ತದ 50 ಬೆಚ್ಚಗಿನ ಕೋಟ್ಗಳು, ಹಾಸಿಗೆಗಳು, ದಿಂಬುಗಳು ಮತ್ತು 700ಕ್ಕೂ ಅಧಿಕ ಹಾಸಿಗೆ ಹೊದಿಕೆಗಳು ಹಾಗೂ ದಿಂಬು ಕವರ್‌ಗಳನ್ನು ದಾನವಾಗಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್  ವಿಶ್ವನಾಥ್ ಎಸ್.ಆರ್. ಮತ್ತು ಉಚ್ಚಿಲ ಶಾಖೆಯ ಮ್ಯಾನೇಜರ್ ಶಾಮ್ ಕುಮಾರ್ ಉಪಸ್ಥಿತರಿದ್ದರು. ಸ್ನೇಹಾಲಯದ ಚಾಪ್ಲಿನ್ ವ. ಫಾದರ್ ಸಿರಿಲ್ ಡಿಸೋಜಾ ಅವರು ಆಶೀರ್ವದಿಸಿದರು.

ಈ ವೇಳೆ ಮಾತನಾಡಿದ ಸ್ನೇಹಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬ್ರದರ್ ಜೋಸೆಫ್, “ಇವು ಕೇವಲ ಹಾಸಿಗೆಗಳು ಅಥವಾ ಕಂಬಳಿಗಳಲ್ಲ; ಇವು ನಿಮ್ಮ ಕಾಳಜಿ, ಭರವಸೆ ಮತ್ತು ಚೇತರಿಕೆಯ ಕಾರ್ಯದಲ್ಲಿ ನಂಬಿಕೆಯ ಸಂಕೇತಗಳು. ಇವು ನಮ್ಮ ನಿವಾಸಿಗಳಿಗೆ ‘ಸಮಾಜ ನಿಮ್ಮನ್ನು ಮರೆತಿಲ್ಲ, ನೀವು ಪ್ರೀತಿಪಾತ್ರರು’ ಎಂಬ ಸಂದೇಶವನ್ನು ನೀಡುತ್ತವೆ,” ಎಂದು ಅವರು ಕೃತಜ್ಞತೆಯಿಂದ ಹೇಳಿದರು. ಇದೇ ವೇಳೆ  2021-22ರಲ್ಲಿ ಕರ್ನಾಟಕ ಬ್ಯಾಂಕ್ ಸ್ನೇಹಾಲಯಕ್ಕೆ ಎಲೆಕ್ಟ್ರಿಕ್ ಆಟೋ ದಾನ ಮಾಡಿದ್ದನ್ನು ನೆನಪಿಸಿಕೊಂಡರು.

ಕರ್ನಾಟಕ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್  ವಿಶ್ವನಾಥ್ ಅವರು ಮಾತನಾಡಿ, “ಕರ್ನಾಟಕ ಬ್ಯಾಂಕಿನ ಸಿಎಸ್ಆರ್ ಬೆಂಬಲವು ನೊಂದ ಜೀವಿಗಳಿಗೆ ತಲುಪಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ. ಸ್ನೇಹಾಲಯ ನಿಸ್ವಾರ್ಥವಾಗಿ ಅದ್ಭುತ ಕೆಲಸವನ್ನು ಮಾಡುತ್ತಿದೆ. ಈ ಪಯಣದ ಭಾಗವಾಗಿರುವುದು ನನಗೆ ಗೌರವದ ಸಂಗತಿ. ಭವಿಷ್ಯದಲ್ಲೂ ನಮ್ಮ ನಿರಂತರ ಬೆಂಬಲವಿರುತ್ತದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ನೇಹಾಲಯದ ಉಪ ಕಾರ್ಯನಿರ್ವಾಹಕಿ ವೀಣಾ, ಬ್ಯಾಂಕ್ ಮತ್ತು ಅದರ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678