ಮಂಗಳೂರು: ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಆದೇಶದಂತೆ, ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೆಣುಗೋಪಾಲ್ ರವರ ನೇತೃತ್ವದಲ್ಲಿ ಆಯೋಜಿಸಲಾದ ನಾಗಾಲ್ಯಾಂಡ್ ರಾಜ್ಯದ ಕಿಫಿರ್ ಜಿಲ್ಲೆ ಮತ್ತು ನೋಕ್ಲಾಕ್ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಎ.ಐ.ಸಿ.ಸಿ ಯ ಮಹತ್ವಾಕಾಂಕ್ಷಿ “ಸಂಘಟನ್ ಸೃಜನ್ ಅಭಿಯಾನ್” ಕಾರ್ಯಕ್ರಮದ ಅನುಷ್ಠಾನ ಪ್ರಕ್ರಿಯೆ, ಸಂಘಟನಾ ಸ್ಥಿತಿ ಹಾಗೂ ನೆಲಮಟ್ಟದ ಬಲವರ್ಧನೆ ಕಾರ್ಯಗಳನ್ನು ಸಮಗ್ರವಾಗಿ ವೀಕ್ಷಿಸಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಕೆ.ಪಿ.ಸಿ.ಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ರವರನ್ನು ಆಯ್ಕೆ ಮಾಡಲಾಗಿದೆ.


