ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಸಭೆ ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಸಭಾ ಭವನದಲ್ಲಿ ಸ್ಥಾಪಕ ಅಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು, ಕಾರ್ಯಾಧ್ಯಕ್ಷ ಚಂದ್ರಶೇಖರ ಯು. ವಿಟ್ಲ ಮತ್ತು ಜಿಲ್ಲಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ ನೇತೃತ್ವದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಗೋಪಾಲ ಕೆ. ನೇರಳಕಟ್ಟೆ ಗೌರವ ಅಧ್ಯಕ್ಷರಾಗಿ ಸೋಮಪ್ಪ ನಾಯ್ಕ ಮಲ್ಯ ಮತ್ತು ದೇರಪ್ಪ ರಾಣ, ಸಂಚಾಲಕರಾಗಿ ಗೋವಿಂದ ನಾಯ್ಕ ಕುಂಡಡ್ಕ ಮತ್ತು ಪದ್ಮನಾಭ ಕುಳಾಲು, ಕಾರ್ಯದರ್ಶಿ ಪ್ರತೀಕ್ಷಾ ಬೆದ್ರಕಾಡು, ಜತೆ ಕಾರ್ಯದರ್ಶಿ ಶೋಭಿತ್ ವಿಟ್ಲ, ಕೋಶಾಧಿ ಕಾರಿ ಬಿ.ಕೆ. ಪ್ರಸಾದ್ ಅನಂತಾಡಿ, ಗೌರವ ಸಲಹೆಗಾರರಾಗಿ ಸೋಮಪ್ಪ ಸುರುಳಿ ಮೂಲೆ, ಕುಶಾಲಪ್ಪ ಮೂಡಂಬೈಲು ಮತ್ತು ರಾಮಣ್ಣಪಿಲಿಂಜ ಆಯ್ಕೆಯಾದರು.
ಜಿಲ್ಲಾ ಉಪಾಧ್ಯಕ್ಷರಾಗಿ ಬಂಟ್ವಾಳ ತಾಲೂಕಿಗೆ ಪ್ರಸಾದ್ ಬೊಳ್ಳಾರು, ಪುತ್ತೂರು ತಾಲೂಕಿಗೆ ಲೋಕೇಶ್ ತೆಂಕಿಲ, ಸುಳ್ಯ ತಾಲೂಕಿಗೆ ರಾಮಣ್ಣ ಪಂಜ, ಕಡಬ ತಾಲೂಕಿಗೆ ಜಯಶ್ರೀ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಬಂಟ್ವಾಳ ತಾಲೂಕಿಗೆ ಶ್ರೀಧರ್ ಕಲ್ಲಂಚಿಪಾದೆ ಮತ್ತು ಕೃಷ್ಣ ನಾಯ್ಕ ಆಲಂಗಾರು ಉಕ್ಕುಡ, ಪುತ್ತೂರು ತಾಲೂಕಿಗೆ ಲಲಿತ ನಾಯ್ಕ ಕಾರ್ಪಾಡಿ ಮತ್ತು ನಾರಾಯಣ ಕಾವು, ಸುಳ್ಯ ತಾಲೂಕಿಗೆ ದಿನೇಶ್ ಕೊಡೆಂಚಿಕಾರು, ಕಡಬ ತಾಲೂಕಿಗೆ ಶ್ರೀನಿವಾಸ ಆಲಂಗಾರು ಅವರನ್ನು ಆಯ್ಕೆ ಮಾಡಲಾಯಿತು.
28 ಗ್ರಾಮಸಮಿತಿ ಕಾರ್ಯದರ್ಶಿಗಳಾಗಿ ಗಣೇಶ್ ಸೀಗೆಬಲ್ಲೆ, ಪುಷ್ಪಾವತಿ ಮಾಮೇಶ್ವರ, ದೀಪಕ್ ಸುರುಳಿಮೂಲೆ, ಕಾರ್ತಿಕ್ ಬೆದ್ರಕಾಡು, ಅನಿತಾ ನಾಯ್ಕ ಕೊರಗಪ್ಪ ಪಿಲಿಂಜ, ರಾಜೇಶ್ ಪಿಲಿಂಜ, ವಸಂತ ಕುಕ್ಕೆಬೆಟ್ಟು, ಲಿಂಗಪ್ಪ ನಾಯ್ಕ ಕೇಪು, ರಾಮ ಮುಗೇರ ಅಳಿಕೆ, ದೇವಕಿ ಅಳಿಕೆ, ರಮೇಶ್ ಬೊಳ್ಳಾರು, ಸತೀಶ ಮೂಡಂ ಬೈಲು, ತಿಮ್ಮಪ್ಪ ಬೈಲಡ್ಕ, ಸತೀಶ್ ಅಗರಿ, ನವೀನ್ ಕುಳಾಲು, ರಾಮ ಮಣಿಮಜಲು, ಪ್ರಕಾಶ್ ನಾಯ್ಕ, ಯಾಧವ ಏಮಾಜೆ, ಶೀನ ಕೆದಿಲ, ಕುಶಾಲಾಕ್ಷಿ, ಲೋಕೇಶ್ ನಾಯ್ಕ, ಸಂಜೀವ ಹೆಗ್ಡೆಕೋಡಿ, ಸೂರಪ್ಪ, ವೀರಮ್ಮ, ಗಂಗಯ್ಯ ಅನಂತಾಡಿ, ಮೋನಪ್ಪ ಅನಂತಾಡಿ ಹಾಗೂ ಸುದರ್ಶನ ಅವರನ್ನು ಆಯ್ಕೆ ಮಾಡಲಾಯಿತು.


