ಮಂಗಳೂರು: ಮನೆಯೊಂದರ ಕಿಟಕಿ ಬಾಗಿಲು ಮುರಿದು ಅಪಾರ ಮೌಲ್ಯದ ಚಿನ್ನಾಭರಣ ಕಳವು ಗೈದಿರುವ ಪ್ರಕರಣ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆಯಲ್ಲಿ ಮಂಗಳವಾರ ವರದಿಯಾಗಿದೆ.
ಪೆರ್ಮುದೆ ನಿವಾಸಿ ಪ್ರವೀಣ್ ಪಿಂಟೊ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಕಳ್ಳರು ಸುಮಾರು 1.080 ಕೆ.ಜಿಯ ಸುಮಾರು 80 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ.
ಮನೆಯ ಮಾಲಕ ಪ್ರವೀಣ್ ಪಿಂಟೊ ಅವರು ಕುಟುಂಬ ಸಮೇತರಾಗಿ ಮಸ್ಕತ್ ನಲ್ಲಿದ್ದು, ಮಾ.31ರ ರಾತ್ರಿಯಿಂದ ಎ.1ರ ಬೆಳಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮನೆಯ ಕೋಣೆಯೊಂದರ ಕಬ್ಬಿಣದ ಸರಳುಗಳನ್ನು ತುಂಡರಿಸಿ ಒಳಹೊಕ್ಕ ಕಳ್ಳರು ಕೊಣೆಯಲ್ಲಿದ್ದ ಬೀರುವನ್ನು ಒಡೆದು ವಿವಿಧ ಆಭರಣಗಳನ್ನು ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ.